Author: C N Bhagya Lakshmi

1

ಭೂಮಿಯ ಸ್ವತ್ತು..

Share Button

ಪುಟ್ಟ ಹಳ್ಳಿಯಲೊಂದು ಇಪ್ಪತ್ತು ಮಕ್ಕಳಿರುವ ಪುಟ್ಟ ಶಾಲೆ.  ಈ ಶಾಲೆಯಲ್ಲಿ ಒಬ್ಬರು ಲಕ್ಷ್ಮಿ ಎನ್ನುವ ಶಿಕ್ಷಕಿ ಪರಿಸರದ ಬಗ್ಗೆ ಅತೀವ ಕಾಳಜಿಯಿಂದ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. ಅದಕ್ಕೆ ತಕ್ಕಹಾಗೆ ಎಲ್ಲೆಲ್ಲಿಂದನೊ ತಂದು ಮರಗಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಹಾಗೇ ತಾವೇ ನಿಂತು ನೀರುಹಾಕುತ್ತಿದ್ದರು.  ಬಿಡುವು ಸಿಕ್ಕಾಗೆಲ್ಲ ಪರಿಸರ ಗೀತೆ,ಕಥೆಗಳನ್ನು...

4

ದೇವರನಾಡಲ್ಲಿ ಒಂದು ದಿನ – ಭಾಗ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಪ್ಪಿದ ಹಾದಿ ಮಾಯನತ್ ವಾಡಿಯಲ್ಲಿ ಚಳಿ ಹೆಚ್ಚಾಗಿದ್ದರಿಂದ ಬೆಚ್ಚಗೆ ಹೊದ್ದು ಮಲಗುವ ಸಮಯವದು. ಆದರೆ ನಾನು ಜಾಗ ಸಾಲದಿರಲು ಕೆಳಗೆ ಹೊದಿಕೆ ಹಾಸಿ ಮಲಗಿದ್ದೆ. ಸಾಮಾನ್ಯವಾಗಿ ಹೊಸ ಜಾಗವೆಂದರೆ ನಿದಿರೆ ಸ್ವಲ್ಪ ದೂರವೇ ಉಳಿಯುತ್ತದೆ. ನನಗೂ ಕೂಡ ಹಾಗೆಯೇ ಆಯಿತು. ನಸುಕಿಗೆ ಎದ್ದು ಪ್ರಕೃತಿಯ...

4

ದೇವರನಾಡಲ್ಲಿ ಒಂದು ದಿನ – ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಜಗದ ಚಕ್ಷು ನಿದಿರೆಗೆ ಜಾರಿದ ಸೂರ್ಯನ ತಾಪದಿಂದ ಬಳಲಿ ಬೆಂಡಾದ ಹೆಂಗಳೆಯರ ಮೊಗವೆಲ್ಲಾ ತಲೆತಗ್ಗಿಸಿದ ಸೂರ್ಯಕಾಂತಿಯ ಹೂವಂತಾಗಿದ್ದವು.   ನಾವು ಅಂದು ಉಳಿದುಕೊಳ್ಳುವ ಜಾಗಕ್ಕೆ ಕಾತರಿಸಿದೆವು. ಅಂತೂ ಇಂತೂ ಹೋಂ ಸ್ಟೇ ಬಂತು. ಮಾನತ್ ವಾಡಿಯದಲ್ಲಿ ಹೋಂ ಸ್ಟೇ ಮಾಡಲಾಗಿತ್ತು.  ಐದೈದು ಜನಕ್ಕೆ ಒಂದು ಕೋಣೆಯ...

4

ದೇವರನಾಡಲ್ಲಿ ಒಂದು ದಿನ – ಭಾಗ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕೈ ಬೀಸಿ ಕರೆವ ಕುರುವಾ           ಪ್ರಕೃತಿ ಸೌಂದರ್ಯಕ್ಕೆ ಪ್ರತೀ ಪ್ರದೇಶವೂ  ಹೇಳಿಮಾಡಿಸಿದ್ದು. ನಮಗೆ ಸವಿಯುವ ಮನಸ್ಸು ಮತ್ತು ಆಂತರಿಕ ಕಣ್ಣು ಎರಡೂ ಮುಖ್ಯ. ನಮ್ಮ ಊರಿನ ಹೊರಗಿನ ದಿಬ್ಬದಲ್ಲೊ, ಮನೆಯ ಮೇಲೆ ನಿಂತರೆ ಕಾಣುವ ಸೂರ್ಯೋದಯ, ಸೂರ್ಯಾಸ್ತ ಎರಡೂ ವಿಶೇಷ ಅನಿಸಲ್ಲ. ಏಕೆಂದರೆ ದಿನನಿತ್ಯ ನೋಡುವ ದೃಶ್ಯಗಳು...

5

ದೇವರನಾಡಲ್ಲಿ ಒಂದು ದಿನ – ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಪ್ರಾಣವಿಧಾತನ ಸನ್ನಿಧಾನ ನಾನಾ ಜೀವಿಗಳ ಆಧಾರತಾಣ ನಾಗರಹೊಳೆಯ ಸೌಂದರ್ಯವನ್ನು ಸವಿಯುತ್ತಾ ಹೊರಟವಳಿಗೆ ಚೆಕ್ ಪೋಸ್ಟ್ ಬಂದದ್ದು ತಿಳಿಯಲೇ ಇಲ್ಲ.  ಏರಿಳಿತಗಳ ಬದುಕಿನಂತೆ ಕಂಡ  ರಸ್ತೆಯ ಉದ್ದಕ್ಕೂ ಸಾಕಷ್ಟು ಗುಂಡಿಗಳು ಎದುರಾದವು.   ತುಂಬಾ ಕಿತ್ತು ಹೋದ ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಆದರೆ ಚೆಕ್ ಪೋಸ್ಟ್...

6

ದೇವರನಾಡಲ್ಲಿ ಒಂದು ದಿನ – ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ನಾಗರ ಹೊಳೆಯ ಹಾದಿ. ಅಂತರ ಸಂತೆಯ ಕಾಫಿ ಸೇವನೆ ನಂತರ  ಕಾರುಗಳು ಬರ್ ಬರ್ ಶಬ್ದದೊಂದಿಗೆ ಹೊರಟವು.  ಈಗ ಎದುರಾದ್ದದ್ದು ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯ ದ್ವಾರ.  ಪ್ರಶಾಂತವಾದ ಕಾಡಲ್ಲಿ ಧ್ವನಿ ಮಾಡುತ್ತಾ ಇದ್ದದ್ದು ವಾಹನಗಳೇ ಹೆಚ್ಚು. ಬರ್ ಬರ್ ಶಬ್ದದೊಂದಿಗೆ ಯಾವ ಪ್ರಾಣಿಗಳ ಶಬ್ಧವನ್ನು...

5

ದೇವರನಾಡಲ್ಲಿ ಒಂದು ದಿನ – ಭಾಗ 2

Share Button

ಅಂತರಸಂತೆಯ ಹಾದಿಯಲಿ. ಪ್ರಕೃತಿಯು ನಮಗೊಂದು ವರದಾನ.  ಎಷ್ಟು ಸವಿದರೂ ಕಡಿಮೆಯೇ… ಕಣ್ಣು ಮನಸುಗಳೆರಡೂ ಒಂದು ಕ್ಷಣ ಮೂಕವಾಗುವ ಸಮಯಕ್ಕೆ….ವ್ಯಾ ವ್ಯಾ ಎನ್ನುವ ಸದ್ದು.  ಏನೆಂದು ಸದ್ದಿಗೆ ಮನ ಕೊಟ್ಟರೆ ಪಕ್ಕದಲ್ಲಿ ದೀಪಶ್ರೀ ಬೆಳ್ಳಂಬೆಳಿಗ್ಗೆಯೇ ಹೊಟ್ಟೆಯೊಳಗಿನ ಕಸವನ್ನು ಕಾರಿನ ಆಚೆ ಕಾರಿಕೊಳ್ಳುತ್ತಿದ್ದಳು.  ಮೊದಲೇ ಹೇಳಿದ್ದಳು.  ನನಗೆ ವಾಂತಿಯಾಗುವುದೆಂದು. ಇಲ್ಲಿಂದಲೇ...

7

ದೇವರನಾಡಲ್ಲಿ ಒಂದು ದಿನ -1

Share Button

ಟ್ರಿನ್….ಟ್ರಿನ್….ಅಂತ ಅಲಾರಾಂ ಹೊಡೆದ ಶಬ್ಧಕ್ಕೆ ಕಿವಿಗಳು ಚುರುಕಾದವು.  ಅಯ್ಯೋ ಇಷ್ಟು ಬೇಗ ಬೆಳಗಾಯಿತ ಎಂದು ಬಂದ್ ಮಾಡಲು ಕಣ್ ಬಿಟ್ಟರೆ ಸಮಯ ನಾಲ್ಕು ಗಂಟೆ….ಓ ನಾನಿಂದು ಹಾಸಿಗೆ ಬಿಟ್ಟು ಏಳಬೇಕಿತ್ತು.  ಕಾರಣ ನಾವಿಂದು ಪ್ರವಾಸ ಹೋಗುವ ದಿನ ಎಂದರಿತು…ತುಸು ಸಡಗರದೇ ಎದ್ದೆ. ಬೆಚ್ಚಗೆ ಮಲಗಿದ್ದ ಮಗಳು..”ಇನ್ನೂ ಸ್ವಲ್ಪ...

5

ನಿವೇದನೆ….

Share Button

ಸತಿಗೆ ಗಂಡನಾಗುಗಂಡನಂತೆ ನಟಿಸಬೇಡ ಬದುಕಿಗೆ ನೆರಳಾಗುಸೋರುವ ಮಾಳಿಗೆಯಾಗಬೇಡ ಬವಣೆಗೆ ಜೊತೆಯಾಗುಬಣವೆಯ ಹತ್ತಿಸಬೇಡ ಮಾನಕ್ಕೆ ನಂಬಿಕೆಯಿಡುಅನುಮಾನದಿ ಬೇಯಿಸಬೇಡ ಮಗುವಿಗೆ ತಂದೆಯಾಗುಬಾಲಿಶವ ಕಸಿಯಬೇಡ ಮಕ್ಕಳಿಗೆ ಗುರುವಾಗುಆದರ್ಶವ ಕೊಂದುಕೊಳ್ಳಬೇಡ ಸಮಾಜಮುಖಿಯಾಗುಅಹಮಿಕೆಯ ದಾಸನಾಗಬೇಡ ಹೆಗಲಿಗೆ ನೊಗವಾಗುನಗುವವರ ಮುಂದೆ ಬೀಳಿಸಬೇಡ ಸ್ವಚ್ಚಂದ ಹಕ್ಕಿಯಾಗುಸ್ವಾತಂತ್ರ ಸಿಕ್ಕಿತೆಂದು ತುಳಿಯಬೇಡ ಆದರ್ಶ ಸತಿಪತಿಯಾಗಲುದಾರಿಯಾಗುದಾರಿಗೆ ಮುಳ್ಳಾಗಬೇಡ…… -ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ +4

4

ರಸ ಋಷಿಯೆಂಬ ‘ಕೃತ್ತಿಕೆ’

Share Button

‘ಷೋಡಶಿ ‘ , ‘ಕೊಳಲ’ನೂದಿಕರೆದಂತಾಗಿ‘ಮಲೆಗಳಲಿ ಮದುಮಗಳಿ’ಗಾಗಿಅಲೆದಾಡಿ‘ಕಾನೂರು ಹೆಗ್ಗಡತಿ’ಯಹುಡುಕಿ‘ಕಲಾಸುಂದರಿ’, ‘ಚಿತ್ರಾಂಗದಾ’ಳ‘ಹೊನ್ನ ಹೊತ್ತಾರೆ ‘ನೆನೆದು‘ಕಾವ್ಯವಿಹಾರ’ದೇ‘ಬಿರುಗಾಳಿ’ಎಬ್ಬಿಸಿ‘ಪ್ರಾರ್ಥನಾ ಗೀತಾಂಜಲಿ’ಯಅರ್ಪಿಸಿ‘ಮಂತ್ರಾಕ್ಷತೆ’ಯನ್ನಿಟ್ಟು‘ಪ್ರೇಮಕಾಶ್ಮೀರ ‘ಸುತ್ತುವಾ‘ಪಕ್ಷಿಕಾಶಿ’ಯಲಿ ಹಾರಾಡಿ‘ಮಹಾರಾತ್ರಿ’ಯಲೂ‘ನವಿಲಾಗಿ ನರ್ತಿಸುವಾ’‘ಜೇನಾಗುವ’…‘ಸ್ಮಶಾನ ಕುರುಕ್ಷೇತ್ರ’ದ ವರೆಗೂ‘ಶೂದ್ರತಪಸ್ವಿ’ಯಂತೆ‘ಹಾಳೂರ’ಲ್ಲೂ ನಾನಿರುವೆ‘ತಪೋನಂದನ’ಮಾಡು‘ನನ್ನಮನೆ’ಯ ….‘ಕಬ್ಬಿಗನ ಕೈಬುಟ್ಟಿ’ಯಲಿ‘ಕನ್ನಡದ ಡಿಂಡಿಮ’ವಬಾರಿಸುವ ‘ರಕ್ತಾಕ್ಷಿ’ಯಾಗಿ ‘ಚಂದ್ರಮಂಚಕೆ ಬಾ ಚಕೋರಿ’ಎಂದುಲಿದಾ‘ಪಾಂಚಜನ್ಯ’…… ‘ನೆನಪಿನ ದೋಣಿ’ಯಲಿ‘ಕೃತಿಕೆ’, ‘ಅಗ್ನಿಹಂಸ’ಗಳಜೀವಂತವಿರಿಸಿ‘ಚಂದ್ರಹಾಸ’, ‘ಬಲಿದಾನ’‘ಕಾನೀನ’ ,’ಜಲಗಾರ’ನ ಕೊಟ್ಟು‘ಯಮನಸೋಲಿ’ಸಿಕನ್ನಡಿಗರೆದೆಯಲಿ‘ನನ್ನ ದೇವರಾ’ಗಿ ನೆಲೆನಿಂತು‘ಶ್ರೀ ರಾಮಾಯಣ ದರ್ಶನ’ವಿತ್ತು‘ವಾಲ್ಮೀಕಿಯ ಭಾಗ್ಯ’...

Follow

Get every new post on this blog delivered to your Inbox.

Join other followers: