Category: ಕಾದಂಬರಿ

7

ಕಾದಂಬರಿ : ‘ಸುಮನ್’ – ಅಧ್ಯಾಯ 3

Share Button

ಹೊಸ ಜೀವನಶೈಲಿ ಒಂದು ವಾರ ಕಳೆಯಿತು. ಬಂದಾಗಿನಿಂದ ಬೆಳಗ್ಗೆ ಬ್ರೆಡ್, ಜಾಮ್ ಮತ್ತು ಗಿರೀಶಗೆ ಆಮಲೆಟ್ ಮಾಡಿ ಹಾಕಿದ್ದ ರಂಗಪ್ಪ. ಅಂದೂ ಅದನ್ನೆ ತಂದಿರಿಸಿದಾಗ “ಏನು ರಂಗಪ್ಪ ದಿನಾಲು ತಿಂಡಿಗೆ ಬ್ರೆಡ್ಡಾ? ನಿಮಗೆ ಉಪ್ಪಿಟ್ಟು, ರೊಟ್ಟಿ, ಅವಲಕ್ಕಿ ಮಾಡೋಕ್ಕೆ ಬರಲ್ವಾ” ಸುಮನ್ ತುಸು ಮುನಿಸಿನಿಂದ ಕೇಳಿದಳು. ರಂಗಪ್ಪ...

9

ಕಾದಂಬರಿ : ‘ಸುಮನ್’ – ಅಧ್ಯಾಯ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಸುಮನ್ ಹಾಗೂ ಗಿರೀಶ ಮೊದಲೇ ಕಾದಿರಿಸಿದ “ಹನಿಮೂನ್ ಟ್ರಿಪ್” ಹಿಡಿಯಲು ಬೆಂಗಳೂರಿಗೆ ಧಾವಿಸಿದರು. ಅಂದೇ ರಾತ್ರಿ ಲಂಡನ್‍ಗೆ ತೆರಳಿದರು. ಲಂಡನ್‌ನಿನಲ್ಲಿ ಬಕ್ಕಿಂಗ್ಹ್ಯಾಮ್ ಅರಮನೆ, ಬಿಗ್ ಬೆನ್, ವಿಶ್ವ ವಿಖ್ಯಾತ ಲಂಡನ್ ಸೇತುವೆ ಮುಂತಾದ ಪ್ರೇಕ್ಷಣೀಯ ಸ್ಥಳಗಳೂ ಸೇರಿದಂತೆ ಮೂರು ದಿನದಲ್ಲಿ ಏನೇನು ನೋಡಬಹುದೋ...

20

ಕಾದಂಬರಿ : ‘ಸುಮನ್’ – ಅಧ್ಯಾಯ 1

Share Button

(ಲೇಖಕಿಯವರ ಕಿರು ಪರಿಚಯ:ಶ್ರೀಮತಿ ಸುಚೇತಾ ಗೌತಮ್‌ ಅವರು ಎಂ.ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಾಫ್ಟವೇರ್ ಕ್ಷೇತ್ರದಲ್ಲಿ ಉದ್ಯೋಗ ಮಾಡಿದ್ದಾರೆ. ಸಾಮಾಜಿಕ, ವೈಜ್ಞಾನಿಕ ಹಾಗೂ ಸೈಬರ್‌ ಕ್ರೈಮ್‌ ಕತೆಗಳನ್ನು ಬರೆಯುತ್ತಾರೆ. ಇವರ ವೈವಿಧ್ಯಮಯ ಕತೆಗಳು ಹಾಗೂ ಕಿರು ಕಾದಂಬರಿಗಳು ಹಲವಾರು ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ....

8

ಸುರಹೊನ್ನೆಗೆ ಕೃತಜ್ಞತೆಯ ವಂದನೆಗಳು.

Share Button

2014 ರಲ್ಲಿ ಜನ್ಮತಳೆದ ‘ಸುರಹೊನ್ನೆ‘ ಅಂತರ್ಜಾಲ ಪತ್ರಿಕೆ ಪ್ರಶಾಂತವಾದ ನದಿಯಂತೆ ಪ್ರವಹಿಸುತ್ತಾ ಮುಂದುವರೆದಿದೆ. ಈ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಹೇಮಮಾಲಾರವರು ನನಗೆ ಪರಿಚಯವಾದದ್ದು ಮೂರು ವರ್ಷಗಳ ಹಿಂದೆ. ಮೊದಲು ನಾನು ಅವರ ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಓದುತ್ತಾ ಅನಿಸಿಕೆಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ದಾಖಲಿಸುತ್ತಿದ್ದೆ. ನಂತರ ಆಗೊಮ್ಮೆ ಈಗೊಮ್ಮೆ...

12

ಕಾದಂಬರಿ: ನೆರಳು…ಕಿರಣ 43

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಒಂದೊಳ್ಳೆಯ ದಿನ ‘ಸಿರಿ’ ಮತ್ತು ‘ಶ್ರೀಧರ’ ಅವರಿಚ್ಚೆಯಂತೆ ಸತಿಪತಿಗಳಾದರು. ಸರ್ಕಾರಿ ಹುದ್ದೆಯನ್ನು ಸೇರಿದರೆ ಊರಿಂದೂರಿಗೆ ವರ್ಗಾವಣೆ ತಪ್ಪಿದ್ದಲ್ಲ ಎಂದರಿತ ಅವರಿಬ್ಬರೂ ತಮ್ಮಲ್ಲೇ ಚರ್ಚಿಸಿ ಒಂದು ಪುಟ್ಟದಾದ ಖಾಸಗಿ ಕ್ಲಿನಿಕ್ ತೆರೆದರು. ಜೊತೆಗೆ ಬೇರೆಬೇರೆ ಆಸ್ಪತ್ರೆಗಳಿಗೆ ಕನ್ಸಲ್ಟೇಷನ್ನಿಗೆ ಹೋಗಿ ಬರುತ್ತಿದ್ದರು. ಮನೆಯ ಪರಿಸ್ಥಿತಿಯನ್ನರಿತು ಅದರಂತೆ...

5

ಕಾದಂಬರಿ: ನೆರಳು…ಕಿರಣ 42

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..‘ಸಿರಿ’ ಬೆಳೆಯುತ್ತಾ ಬರುತ್ತಿದ್ದಂತೆ ಮನೆಯ ವಿದ್ಯಮಾನಗಳ ಪರಿಚಯ, ಹೆತ್ತಮ್ಮನ ಗಾಂಭೀರ್ಯ, ವೇಷಭೂಷಣ, ಅನುಸರಿಸುತ್ತಿರುವ ಕಠಿಣ ಕಟ್ಟುಪಾಡುಗಳು ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಈ ಬಗ್ಗೆ ಹಿರಿಯರನ್ನು ಪ್ರಶ್ನಿಸಿದಾಗೆಲ್ಲ ಸಾಮಾಜಿಕ ರೀತಿ ರಿವಾಜುಗಳ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಿದ್ದರು. ಪುಟ್ಟ ಭಾಷಣವನ್ನೇ ಮಾಡುತ್ತಿದ್ದರು. ಇವುಗಳಿಂದ ಅವಳಿಗೆ ಸಮರ್ಪಕ ಉತ್ತರವೆಂದೆನಿಸದೆ...

7

ಕಾದಂಬರಿ: ನೆರಳು…ಕಿರಣ 41

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಇದುವರೆಗೆ ಭಾಗ್ಯಳಿಗೆ ತನ್ನ ಗಂಡನ ಬಗ್ಗೆ ಇದ್ದ ಗೌರವಾದರಗಳು ಒಮ್ಮೆಗೇ ಕೊಚ್ಚಿಹೋಗಿದ್ದವು. ಬೇರೆಯವರಿಗೆ ಜಾತಕಗಳನ್ನು ಬರೆದುಕೊಟ್ಟು ಅದರಲ್ಲಿನ ದೋಷಗಳಿಗೆ ಸೂಕ್ತ ಪರಿಹಾರ ಸೂಚಿಸುತ್ತಿದ್ದವರಿಗೆ, ಕುಲದೈವದ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದವರ ವಿವೇಚನೆ ಇಷ್ಟೊಂದು ಬಲಹೀನವೇ? ಒಂದೇ ಒಂದು ಸಾರಿ ಎಲ್ಲರೊಡನೆ, ಬೇಡ...

5

ಕಾದಂಬರಿ: ನೆರಳು…ಕಿರಣ 40

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಈ ಅಂತರದಲ್ಲಿ ರಾಮಣ್ಣನವರ ಮಗ ಮಧು ಭಟ್ಟರ ಮನೆ ಅಂಗಡಿ ಎಲ್ಲದ್ದಕ್ಕೂ ಬೆಲೆ ಕಟ್ಟಿಸಿ ತಾನೇ ಕೊಡುಕೊಳ್ಳಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದನು. ಮಗಳ ಮನೆಯನ್ನು ಬಿಟ್ಟು ಹೋಗಲಾರದ ಅನಿವಾರ್ಯತೆ, ಅಗತ್ಯತೆ, ಆವಶ್ಯಕತೆಗಳನ್ನರಿತ ಲಕ್ಷ್ಮಿ ಭಟ್ಟರಿಗೆ ತಿಳಿಯಹೇಳಿ ಅವನ್ನು ಮಾರಲು ಒಪ್ಪಿಸಿದಳು. ನಿರ್ವಾಹವಿಲ್ಲದೆ ಭಟ್ಟರು ಅವುಗಳನ್ನು...

8

ಕಾದಂಬರಿ: ನೆರಳು…ಕಿರಣ 39

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಷಯ ತಿಳಿದು ಬೇರೆ ಊರುಗಳಿಂದ ಬಂದಿಳಿದಿದ್ದ ಬಂಧುಬಾಂದವರು ಮನೆಯ ಪರಿಸ್ಥಿತಿಯನ್ನು ಅರಿತು ಕೇಶವಯ್ಯನವರ ಸಲಹೆ ಸೂಚನೆ ಪಡೆದುಕೊಂಡು ಮುಂದಿನ ತಯಾರಿ ನಡೆಸಿದ್ದರು. ಎಲ್ಲವೂ ಸಿದ್ಧವಾದ ಮೇಲೆ ಶಾಸ್ತ್ರೋಕ್ತವಾಗಿ ಮಾಡಬೇಕಾದ ಧಾರ್ಮಿಕ ಕ್ರಮಗಳನ್ನು ನೆರವೇರಿಸಿ ಶ್ರೀನಿವಾಸನ ಅಂತ್ಯಕ್ರಿಯೆಯನ್ನು ಪೂರೈಸಿ ಬಂದರು. ಎಲ್ಲರೂ ಸ್ನಾನಗಳನ್ನು ಮುಗಿಸುವಷ್ಟರಲ್ಲಿ...

4

ಕಾದಂಬರಿ: ನೆರಳು…ಕಿರಣ 38

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಲಕ್ಷ್ಮಿ ಭಟ್ಟರಿಗಂತೂ ಮೊಮ್ಮಗಳ ಲಾಲನೆ, ಪಾಲನೆಯಲ್ಲಿ ದಿವಸಗಳು ಹೇಗೆ ಕಳೆಯುತ್ತಿದ್ದವು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇತರ ಮೊಮ್ಮಕ್ಕಳಿಗಿಂತ ಈಕೆ ಚಲುವೆ ಎಂದೆನ್ನಿಸುತ್ತಿತ್ತು. ಭಾಗ್ಯಳಿಗಂತೂ ಮನೆಯ ಹಿರಿಯರ ಅಗಲಿಕೆಯ ದುಃಖವು ಈ ಹೊಸ ಅತಿಥಿಯ ಆಗಮನದಿಂದ ದೂರವಾಗತೊಡಗಿತು. ಯಾವ ಕಾರಣಕ್ಕೂ ಸಂಗೀತಶಾಲೆ ನಿಲ್ಲಿಸಬಾರದೆಂಬ ನಿಲುವಿಗೆ...

Follow

Get every new post on this blog delivered to your Inbox.

Join other followers: