Category: ಲಹರಿ

4

ಭಗವದ್ಗೀತಾ ಸಂದೇಶ

Share Button

ಮನುಷ್ಯ ತನ್ನ ಜೀವನ ಪಥದಲ್ಲಿ ಬಂದುದನ್ನು ಬಂದಂತೆಯೇ ಸ್ವೀಕರಿಸಬೇಕು. ಅದರ ಸಾಧಕ- ಬಾಧಕಗಳ ಬಗ್ಗೆ ಚಿಂತಿಸಬಾರದು.ಮುಂದಾಗುವ ಪರಿಣಾಮದ ಬಗೆಗೆ ಯೋಚಿಸಿ ಭಯ ಭೀತರಾಗಿ ಕರ್ತವ್ಯದಿಂದ, ಜವಾಬ್ದಾರಿಯಿಂದ ಹಿನ್ನಡೆಯಬಾರದು ;ಎಂಬುದೇ ಶ್ರೀಮದ್ ಭಗವದ್ಗೀತೆಯ ಪರಮ ಸಂದೇಶವಾಗಿದೆ; ಸ್ಥಿತಪ್ರಜ್ಞನು ತನ್ನ ಕರ್ತವ್ಯವನ್ನು ಅರಿತು ಮುಂದುವರೆಯುತ್ತಾನೆ. ಉದಾಹರಣೆಗೆ ಶ್ರೀರಾಮಚಂದ್ರನು ಸುಖ –...

6

ನಾವು ನಮ್ಮೊಳಗೆ

Share Button

ಮೊನ್ನೆ ತಾನೆ 75 ನೇ ಗಣರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದ್ದೇವೆ.  ಅದಕ್ಕೆ ಮೂರು ದಿನಗಳ ಮುಂಚೆ ಮೈ ರೋಮಾಂಚನಗೊಳ್ಳುವ ಐತಿಹಾಸಿಕ ಘಟನೆಯಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾದ ಕಾಲಮಾನದಲ್ಲಿ ನಾವು ಜೀವಿಸಿದ್ದೇವೆ ಎಂಬುದೇ ಇಂದು ಮೈಮನಗಳು ಪುಳಕಗೊಳ್ಳುವ ವಿಚಾರ. ನಾಲ್ಕು ವರುಷಗಳ ಹಿಂದೆ ಕರೋನಾ ಹೆಮ್ಮಾರಿಯಿಂದ ಈ ಭೂಲೋಕವೇ ತತ್ತರಿಸುವಂತಹ...

10

ಸಾಹಿತ್ಯ ರಚನೆಯ ಹುಟ್ಟು

Share Button

ಲೋಕಕ್ಕೂ ನಮಗೂ ನಿರಂತರ ಇರುವ ಸಂಪರ್ಕವೇ ಅನುಭವ. ಈ ಅನುಭವಗಳಲ್ಲಿ ಸಂತೋಷವೂ ಇರಬಹುದು, ಸಂಘರ್ಷಗಳೂ ಇರಬಹುದು. ಇವೆಲ್ಲವೂ ನಮ್ಮ ಮನಸ್ಸೆಂಬ ಗುಪ್ತವಾದ ಕೋಣೆಯಲ್ಲಿ ಶೇಖರಿಸಲ್ಪಡುತ್ತವೆ. ಹೀಗೆ ಮನದಲ್ಲಿ ಹುದುಗಿರುವ ಭಾವನೆಗಳಿಗೆ ಸಮಯ, ಸಂದರ್ಭ, ಸದವಕಾಶಗಳು ದೊರೆತಾಗ, ಒತ್ತಡ ಉಂಟಾದಾಗ ಅದು ಹೊರ ಹೊಮ್ಮುತ್ತದೆ. ಈ ಭಾವನೆಗಳು ಬರಹ,...

7

ಏಕಾಂಗಿ ಬದುಕು – 3: ಕೈಕೊಟ್ಟ ನೆನಪುಗಳು ಚಿಕಿತ್ಸೆಯಾಗಬಲ್ಲದೆ..?

Share Button

ನಾವು ಅನುಭವಿಸುವ ಯಾವುದೇ ಸಂದರ್ಭಗಳನ್ನು ಅನುಭಾವಿಸಬೇಕೆಂದರೆ ಮನಸ್ಸಿನ ಅಭಿಮತ ಬಹಳವೇ ಮುಖ್ಯ. ಆಲೋಚನೆಗಳು, ಮನದ ಚಲನೆಗಳು ನಿಯಂತ್ರಣ ತಪ್ಪಿತೆಂದರೆ ಸಾಮಾನ್ಯ ಆಸೆಗಳೂ ಅನುಭವಕ್ಕೆ ಬಾರದಂತೆ ನಿಯಂತ್ರಣ ಕಳೆದುಕೊಳ್ಳುತ್ತವೆ. ನೋಟ ಮಾತಾಗುವ,ಮಾತು ಹಾಡಾಗುವ,ಹಾಡು ಅನುರಾಗವಾಗುವ ಸಮಯದಲ್ಲಿ ಸುಪ್ತಮನಸ್ಸಿನ ಚೇತನವು ನಿಯಂತ್ರಣ ತಪ್ಪುವುದು ಸಹಜ. ಆ ಕ್ಷಣದ ಯೋಚನೆಗಳು, ಯೋಜನೆಗಳು...

10

ಏಕಾಂಗಿ ಬದುಕು -2: ಏಕಾಂಗಿಯ ಬದುಕಲ್ಲಿ ಕಬ್ಬ ತಂದ ಹಬ್ಬ

Share Button

ಯಾವುದಾರೂ ಮಾಯೆಯೊಮ್ಮೆ ಆವರಿಸಿತೆಂದರೆ ಅದರಿಂದ ಬಿಡಿಸಿಕೊಳ್ಳುವುದೇ ಕಷ್ಟ. ಅದೂ ಎಂಥಾ ಮಾಯೆ ನನ್ನ ಆವರಿಸಿದ್ದು? ಬರೆಹದ ಮಾಯೆ ರೀ ……ಬರೆಹ. ಇದು ಎಲ್ಲರನ್ನೂ ಆವರಿಸುವುದಿಲ್ಲ. ಕೆಲವರನ್ನು ಮಾತ್ರ ಆವರಿಸುತ್ತದೆ ಅಲ್ಲವೇ. ನೋಡಿದ್ದು, ಕೇಳಿದ್ದು,ಕಲ್ಪಿಸಿದ್ದು, ಕಲ್ಪನೆಗೂ ಮೀರಿದ್ದು , ತೋಚಿದ್ದು, ಗೀಚಿದ್ದು, ಅನುಭವಿಸಿದ್ದು, ಕಲಿತದ್ದು, ಕಲಿಯ ಹೊರಟಿದ್ದು, ಕಲಿವಿನ...

6

ಏಕಾಂಗಿ ಬದುಕು-1

Share Button

ಹುಟ್ಟುತ್ತಾ ಏಕಾಂಗಿ, ಸತ್ತಾಗಲೂ ಏಕಾಂಗಿ, ನಡುವೆ ಬೆಳೆಯುತ್ತಾ ಬದುಕುವ ಸಮಯದಲ್ಲಿ ಏನೆಲ್ಲಾ ಸಂಪಾದಿಸಿದೆವು ಎಂದು ತಿರುಗಿ ನೋಡಿದರೆ, ಒಂದಷ್ಟು ಪ್ರೀತಿ,ಸ್ನೇಹ, ವಾತ್ಸಲ್ಯ, ಮಮತೆ….ಹೀಗೆ ಅನೇಕ ಭಾವಬಂಧನಗಳನ್ನು ಸಂಪಾದಿಸಿಕೊಂಡು ಬರುತ್ತೇವೆ.ಅಪ್ಪ, ಅಮ್ಮ, ಅಣ್ಣಾ,ತಂಗಿ, ಮತ್ತಿತರ ಸಂಬಂಧಗಳನ್ನು ಹೊತ್ತು ತರುವ ಈ ಬದುಕು ಅನೇಕ ಸ್ನೇಹಿತರನ್ನು , ಕಾಣದ ಬಂಧುಗಳನ್ನು,...

13

ಪಿಂಕ್ ರಿಕ್ಷಾ- ಹೆಣ್ಣಿಗೆ ಶ್ರೀರಕ್ಷೆ

Share Button

ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು. ಈ  ಸಂದರ್ಭದಲ್ಲಿ ಗುಜರಾತಿನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಸರ್ದಾರ್ ವಲ್ಲಭ ಭಾಯಿ ಪಟೇಲರ 182 ಮೀಟರ್ ಎತ್ತರದ ಮೂರ್ತಿಯನ್ನು ಸಂದರ್ಶಿಸಲೆಂದು ಹೋಗಿದ್ದಾಗ, ಅಲ್ಲಿ ಸಾಲಾಗಿ ನಿಂತಿದ್ದ ಕೇವಲ ಮಹಿಳೆಯರೇ ಚಲಾಯಿಸುವ ಗುಲಾಬಿ...

9

ಯಾರಿವರು ಅನಾಮಿಕರು

Share Button

ಯಾರಿವರು, ಸದ್ದಿಲ್ಲದೆ ನಮ್ಮ ಬದುಕನ್ನು ಹಸನಾಗಿಸುತ್ತಿರುವ ಮಹಾನ್ ವ್ಯಕ್ತಿಗಳು, ಎಲೆ ಮರೆಯ ಕಾಯಿಗಳಂತೆ ಅಗತ್ಯವಿದ್ದವರಿಗೆ ತಮ್ಮ ನೆರವಿನ ಹಸ್ತ ಚಾಚುತ್ತಿರುವರು? ಇವರ ಸಮಾಜಸೇವೆಯ ಬಗ್ಗೆ ವರದಿಗಳಾಗಲಿ, ಫೋಟೋಗಳಾಗಲಿ ದಿನಪತ್ರಿಕೆಗಳಲ್ಲಿ ಪ್ರಕಟಣೆಯಾಗಿಲ್ಲ, ಇವರ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಬನ್ನಿ, ಇವರ ಪರಿಚಯ ಮಾಡಿಕೊಳ್ಳೋಣ – ಮುಂಜಾನೆ...

9

ಅಧಿಕ

Share Button

ಈ ವರ್ಷದಲ್ಲಿ ಶ್ರಾವಣಮಾಸ ಅಧಿಕವಾಗಿ ಬಂದಿತ್ತು. ಆಗ ಸಂಪ್ರದಾಯಸ್ಥರು ಪಂಚಾಗದಂತೆ ಅದನ್ನು ಹೊರತುಪಡಿಸಿ ನಿಜ ಶ್ರಾವಣಮಾಸದಲ್ಲಿ ಮಾತ್ರ ಬಹುತೇಕ ಶುಭಕಾರ್ಯಗಳನ್ನು ಮಾಡುವುದುಂಟು. ಇಂತಹ ಅಧಿಕ ಮಾಸಗಳು ಚಾಂದ್ರಮಾನ ಪದ್ಧತಿಯಲ್ಲಿ ನಾಲ್ಕುವರ್ಷಗಳಿಗೊಂದರಂತೆ ಬರುತ್ತವೆ. ಇದು ಕ್ಯಾಲೆಂಡರಿನಲ್ಲಿ ಪರಿಗಣಿಸುವ ಹನ್ನೆರಡು ತಿಂಗಳಿಗೆ ಸರಿದೂಗಿಸಲು ಮಾಡುವ ಒಂದು ಸಣ್ಣ ಹೊಂದಾಣಿಕೆ. ಹೀಗಾಗಿ...

10

ಕಳ್ಳತನದ ಭಯದಲ್ಲಿ…

Share Button

ಈ ಮಾರ್ಚ್ ತಿಂಗಳ ಒಂದು ಭಾನುವಾರ “ರಜ ಅಲ್ವಾ ಬಿಡು” ಎಂದುಕೊಂಡು ತಡವಾಗಿ ಎದ್ದು, ಕಣ್ಣುಜ್ಜುತ್ತಾ, ಆಕಳಿಸುತ್ತಾ ಅಡುಗೆ ಮನೆಗೆ ಬಂದವಳ ಕಣ್ಣು ಯಾಕೋ ಅಚಾನಕ್ ಆಗಿ ಕಿಟಕಿಯಿಂದ ಆಚೆ ಹೋಯಿತು.ನೋಡಿದರೆ ನಮ್ಮ ಹಿಂದಿನ ಮನೆ ಬಾಗಿಲ ಬಳಿ ಜನ ಮುಕುರಿಕೊಂಡು ನಿಂತಿದ್ದಾರೆ! ಮನೆ ಹತ್ತಿರ ಪೊಲೀಸ್...

Follow

Get every new post on this blog delivered to your Inbox.

Join other followers: