Category: ಪರಾಗ
ವಾಟ್ಸಾಪ್ ಕಥೆ 46 : ಗಾಜು ಮತ್ತು ವಜ್ರ
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನು ದಕ್ಷನಾಗಿದ್ದ. ಪ್ರಜಾಪಾಲನೆಯನ್ನು ಸಮರ್ಪಕವಾಗಿ ಮಾಡುತ್ತಿದ್ದ. ಜನಪ್ರಿಯನಾಗಿದ್ದ. ಒಂದು ಛಳಿಗಾಲದ ಅಧಿವೇಶನವನ್ನು ಅರಮನೆಯ ಮುಂದಿನ ತೆರೆದ ಸಬಾಂಗಣದಲ್ಲಿ ನಡೆಸಲು ತೀರ್ಮಾನಿಸಿದ. ರಾಜಸಭೆಯನ್ನು ನೋಡಲು ಹಲವರು ಸಾಮಾನ್ಯ ಪ್ರಜೆಗಳೂ ಅಲ್ಲಿ ನೆರೆದಿದ್ದರು. ರಾಜನು ಮೊದಲಿಗೆ ಸಕಲರ ಯೋಗಕ್ಷೇಮಗಳನ್ನು ವಿಚಾರಿಸಿದ, ಮುಂದಿನ ಕಲಾಪಗಳನ್ನು ಪ್ರಾರಂಭಿಸುವವನಿದ್ದ. ಅಷ್ಟರಲ್ಲಿ...
ವಾಟ್ಸಾಪ್ ಕಥೆ 45 : ಎಲ್ಲವನ್ನೂ ನೀಡುವ ದೇವರು.
ಒಬ್ಬ ಗೌರವಾನ್ವಿತ ಗೃಹಸ್ಥನ ಮನೆಯಲ್ಲಿ ಅವನಿಗಿದ್ದ ಒಬ್ಬಳೇ ಮಗಳ ಐದುವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆತ ತನ್ನ ಗೆಳೆಯರ ಬಳಗ, ಆಪ್ತೇಷ್ಟರೆಲ್ಲರನ್ನೂ ಆಹ್ವಾನಿಸಿದ್ದ. ಆ ಗುಂಪಿನಲ್ಲಿ ಒಬ್ಬ ನಾಸ್ತಿಕ ಗೆಳೆಯನೂ ಇದ್ದನು. ಆತ ಗೃಹಸ್ಥನ ಪುಟ್ಟ ಮಗಳಿಗೆ ಒಂದು ಸುಂದರವಾದ ಮರದ ಬೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟು...
ವಾಟ್ಸಾಪ್ ಕಥೆ 44 : ಅಂತಸ್ತಿಗಿಂತ ಕರ್ಮನಿಷ್ಠೆ ದೊಡ್ಡದು.
ಒಂದೂರು. ಅಲ್ಲಿ ಒಬ್ಬ ಜಮೀನುದಾರ ಮತ್ತು ಅವನಲ್ಲಿ ಸೇವೆಯಲ್ಲಿದ್ದ ಸಹಾಯಕರಿಬ್ಬರೂ ಒಂದೇ ದಿನ ತೀರಿಹೋದರು. ಸತ್ತ ನಂತರ ಅವರಿಬ್ಬರ ಆತ್ಮಗಳು ಯಮಧರ್ಮರಾಜನ ಆಸ್ಥಾನದಲ್ಲಿ ವಿಚಾರಣೆಗಾಗಿ ನಿಂತವು. ಜಮೀನುದಾರನ ಖಾತೆಯಲ್ಲಿನ ವಿವರಗಳೆಲ್ಲವನ್ನು ಪರಿಶೀಲಿಸಿದ ನಂತರ ಯಮಧರ್ಮನು ಅವನಿಗೆ ಅಲ್ಲಿ ಸೇವಕನ ಕೆಲಸ ನಿರ್ವಹಿಸುವಂತೆ ಆದೇಶಿಸಿದ. ಸೇವಕನ ವಿವರಗಳನ್ನು ಪರಿಶೀಲಿಸಿ...
ಎಲ್ಲಿಗೆ ಪಯಣ?
ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಮಾರನೆಯ ಬೆಳಗಿನ ಉಪಾಹಾರಕ್ಕೆ ಪರಿಕರಗಳನ್ನು ಅಣಿಮಾಡಿದ್ದರು ಪಾರ್ವತಿ. ನೀರುತುಂಬಿದ ಜಗ್ಗು, ಲೋಟಗಳನ್ನು ಹಿಡಿದು ತಮ್ಮ ರೂಮಿಗೆ ಬಂದರು. ಗಂಡ ಶಿವರಾಮುವಿನ ಸುಳಿವೇ ಇಲ್ಲ. ಇಷ್ಟು ಹೊತ್ತಿನಲ್ಲಿ ಎಲ್ಲಿ ಹೋದರೆಂದುಕೊಳ್ಳುತ್ತಾ ಬಾತ್ರೂಮಿನ ಕಡೆ ಕಣ್ಣಾಡಿಸಿದರು.ಊಹುಂ, ಅಲ್ಲಿ ಬಾಗಿಲು ಹೊರಗಿನಿಂದ ಬೋಲ್ಟ್ ಹಾಕಿದೆ. ಹಾಗಾದರೆ...
ಮುನ್ನಿಯ ಬಳೆಗಳು
ಅಂದು ಸಂಕಾಂತಿ ಹಬ್ಬ. ಮುನ್ನಿಗೆ ಖುಷಿಯೋ ಖುಷಿ. ಅವಳ ಸಂಭಮಕ್ಕೆ ಕಾರಣ ಒಂದೆರಡಲ್ಲ. ಮೊದಲೇ ಅವಳಿಗೆ ಸಂಕಾಂತಿ ಹಬ್ಬ ಅಂದರೆ ಸಂತೋಷ ಜಾಸ್ತಿ. ಹೊಸ ಡ್ರೆಸ್ ಧರಿಸಿ ಅಮ್ಮನ ಹತ ಉದ್ದಕ್ಕೆ ಜಡೆ ಹೆಣಿಸಿಕೊಂಡು ಹೂ ಮುಡಿದು ಒಡವೆ ಧರಿಸಿ ತನ್ನ ಬೀದಿಯಲ್ಲಿರುವ ಮನೆಗಳಿಗೆಲ್ಲ ಎಳ್ಳು ಬೆಲ್ಲ...
ವಾಟ್ಸಾಪ್ ಕಥೆ 43 : ಏಕಾಗ್ರತೆ.
ಅದೊಂದು ಪಾನಗೃಹ. ಅಲ್ಲಿ ಗ್ರಾಹಕರ ಗದ್ದಲ. ಕುಡಿಯುವುದು, ತಿನ್ನುವುದು, ತಮ್ಮತಮ್ಮೊಳಗೆ ಜೋರು ದನಿಯಲ್ಲಿ ಹರಟುವುದು ಎಲ್ಲವೂ ನಿರಂತರವಾಗಿ ನಡೆದಿತ್ತು. ಗ್ರಾಹಕರ ವೈವಿಧ್ಯಮಯ ಬೇಡಿಕೆಗಳಿಗೆ ತಕ್ಕಂತೆ ಅಂಗಡಿಯ ಕೆಲಸಗಾರರು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸರಭರ ಓಡಾಡುತ್ತಾ ಸೇವೆ ಮಾಡುತ್ತಿದ್ದರು. ಅಂಗಡಿಯ ಮೂಲೆಯಲ್ಲಿ ಒಂದು ಖುರ್ಚಿ ಅದರ ಮುಂದೊಂದು ಮೇಜು ಇದ್ದವು...
ವಾಟ್ಸಾಪ್ ಕಥೆ 42 : ಸ್ವರ್ಗ-ನರಕ.
ಒಂದೂರಿಗೆ ಒಮ್ಮೆ ಕುದುರೆಯೇರಿ ರಾಜದೂತನೊಬ್ಬ ಕಾರಣಾಂತರದಿಂದ ಬಂದಿಳಿದ. ಆ ಊರಿನ ಜನರು ಮುಗ್ಧರು. ರಾಜ್ಯದ ರಾಜನೆಂದರೆ ಅಪಾರ ಗೌರವ. ಅವನನ್ನು ರಾಜನೇ ಬಂದನೆಂಬಂತೆ ಉಪಚಾರ ಮಾಡಿದರು. ಅವನಿಗೆ ತುಂಬ ಸಂತೋಷವಾಯಿತು. ಅವನಿಗೆ ರುಚಿಕರವಾದ ಭೋಜನ ಮಾಡಿಸಿ ಮಲಗಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿಕೊಟ್ಟರು. ಇನ್ನೇನಾದರೂ ಬೇಕಾದರೆ ಕೂಗಿ ಕರೆದರೆ...
ಬದಲಾದ ಬದುಕು – 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮತ್ತೆ ನಾಲ್ಕಾರು ದಿನಗಳಲ್ಲಿ ಇನ್ನೊಂದು ಭಿನ್ನಾಭಿಪ್ರಾಯ ತಡೆಯಲಾಗಲಿಲ್ಲ ಅವಳಿಗೆ. ಉಂಡು ತಿಂದ ತಟ್ಟೆ ಲೋಟಗಳನ್ನು ತೊಳೆಯುವುದಿರಲಿ, ತೆಗೆದು ಸಹಾ ಇಬ್ಬರೂ ಇಡುತ್ತಿರಲಿಲ್ಲ. ಸ್ಪೂನಿನಲ್ಲಿ ತಿಂದು ಹಾಗೇ ಎದ್ದು ಹೋಗುತ್ತಿದ್ದರು. ಮಾರನೆಯ ದಿನ ʼಬಾಯಿʼ ಬಂದಾಗಲೇ ಅವುಗಳಿಗೆ ಮುಕ್ತಿ ಕಾಣುತ್ತಿದ್ದುದು. ಅಡುಗೆಯೂ ಅಷ್ಟೆ, ಮಿಕ್ಕ ಅಡುಗೆಯನ್ನು...
ಬದಲಾದ ಬದುಕು ಭಾಗ -1
ಮನೆಗೆ ಹಾಕಿರುವ ಬೀಗ ಸರಿಯಿದೆಯೇ ಎಂದು ಎರಡೆರಡು ಸಲ ಜಗ್ಗಿ ನೋಡಿ ಖಾತ್ರಿ ಮಾಡಿಕೊಂಡ ಜಾನ್ಹವಿ, ಮಗ ಕಳಿಹಿಸಿರುವ ಓಲಾ ಟ್ಯಾಕ್ಸಿಯಲ್ಲಿ ಇಟ್ಟಿರುವ ಸಾಮಾನುಗಳು ಸರಿಯಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ, ಆರಾಮವಾಗಿ ಕುಳಿತುಕೊಂಡಳು. ಟ್ಯಾಕ್ಸಿ ಬೆಂಗಳೂರು ಏರ್ ಪೋರ್ಟಿನ ಕಡೆ ಹೊರಟಿತು. ಹೊರಟು ಸರಿಯಾಗಿ ಐದು ನಿಮಿಷಗಳೂ...
ನಿಮ್ಮ ಅನಿಸಿಕೆಗಳು…