ಶಿರಸಿಯಲ್ಲಿ “ಸಪ್ತಕ” ದಿಂದ ಸಂಗೀತ ಸಂಧ್ಯಾ ಕಾರ್ಯಕ್ರಮ: ಭಾಗ-2

Share Button

Ranganna Nadagir

ಇನ್ನೂ  ಪ್ರೇಕ್ಷಕರ  ಮನದಲ್ಲಿ  ವೇಣು ವಾದನದ  ಗುಂಗು ಇದ್ದಂತೆಯೇ ,ಎರಡನೆಯ  ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲು ಗಾಯಕ   ಪಂಡಿತ  ಸಂಜೀವ ಅಭ್ಯಂಕರ , ಮುಂಬೈ  ತಬಲಾ ಪ್ರವೀಣ ಪಂಡಿತ ರವೀಂದ್ರ ಯಾವಾಗಲ್   ಮತ್ತು  ಸುರೀಲೀ  ಹಾರ್ಮೋನಿಯಂ ಪಟು ಪಂಡಿತ ವ್ಯಾಸ ಮೂರ್ತಿ ಕಟ್ಟಿ ಬೆಂಗಳೂರು  ಇವರು ವೇದಿಕೆಗೆ ಆಗಮಿಸುತ್ತಿದ್ದಿಂತೆಯೇ  ಸಭಿಕರು  ಚಪ್ಪಾಳೆಗಳ   ಮೂಲಕ  ಸ್ವಾಗತಿಸಿದರು,, ಸಪ್ತಕದ , ಶ್ರೀ ಜಿ .ಎಸ್ . ಹೆಗಡೆಯವರು   ಕಲಾಕಾರರ  ಪರಿಚಯ ಮಾಡಿಕೊಟ್ಟರು.

ಶ್ರೀ ಸಂಜೀವ ಅಭ್ಯಂಕರರು, ಪದ್ಮ ವಿಭೂಷಣ ಪಂಡಿತ  ಜಸರಾಜ ಅವರ ಹಿರಿಯ ಹಾಗು ಅಚ್ಚು ಮೆಚ್ಚಿನ ಶಿಷ್ಯರು.ದೇಶ, ವಿದೇಶಗಳಲ್ಲಿ  ಅನೇಕ ಕಾರ್ಯಕ್ರಮಗಳನ್ನು ನೀಡಿ ಭೇಷ್  ಎನ್ನಿಸಿಕೊಂಡಿದ್ದಾರೆ. ಎರಡನೆಯದಾಗಿ, ತಬಲಾ ಮಾಂತ್ರಿಕ  ರವೀಂದ್ರ ಅವರು  ಪಂಡಿತ  ಲಾಲಜಿ  ಗೊಖಲೆಯವರಲ್ಲಿ ಅಭ್ಯಾಸ ಮಾಡಿದ್ದೂ, ಹಿರಿಯ ಕೀರ್ತಿವಂತ,ಜನಾನುರಾಗಿಯಾದ  ಇವರನ್ನು ಕರ್ನಾಟಕದ ಜನತೆಗೆ ಪರಿಚಯ  ಮಾಡಿ  ಕೊಡುವ  ಅವಶ್ಯಕತೆಯೇ ಇಲ್ಲ, ಇನ್ನು ಪಂಡಿತ ವ್ಯಾಸಮೂರ್ತಿ ಕಟ್ಟಿಯವರು, ಮೂಲತಃ   ಸಾಫ್ಟವೇರ  ಇಂಜಿನಿಯರ್  ಆಗಿದ್ದು, ಸಂಗೀತ ಸೇವೆಗಾಗಿ (ಒಳ್ಳೆಯ  ಸಂಬಳವಿದ್ದ  ನೌಕರಿ ತ್ಯಜಿಸಿ )  ತಮ್ಮ ಜೀವನ ಮುಡುಪಾಗಿಇಟ್ಟಿದ್ದಾರೆ. ಅವರು ಉತ್ತಮ ಗಾಯಕರೂ ಹೌದು , ಇಂಥ ಮೂವರು ದಿಗ್ಗಜರ   ಸಂಗೀತ ಕಾರ್ಯಕ್ರಮವನ್ನು  ನೋಡೀ, ಕೇಳಿ  ಆನಂದಿಸಲು ಅವಕಾಶ ಮಾಡಿಕೊಟ್ಟ ಎರಡು ಸಂಸ್ಥೆಗಳಿಗೆ  ನಾವು  ಆಭಾರಿಯಾಗಿದ್ದೇವೆ

ಸಂಗೀತ  ಪ್ರಾರಂಭಿಸುವ   ಪೂರ್ವದಲ್ಲಿ  ನಾಲ್ಕು  ಸಂಗೀತ  ವಿದ್ಯಾರ್ಥಿಗಳಿಗೆ  ಸಪ್ತಕ ಸಂಸ್ಥೆಯ ಪರವಾಗಿ ಪಂಡಿತ ಸಂಜೀವ್ ಅವರ ಅಮೃತ ಹಸ್ತದಿಂದ ವಿದ್ಯಾರ್ಥಿ ವೇತನದ ಪ್ರಮಾಣ  ಪತ್ರಗಳನ್ನು  ವಿತರಿಸಲಾಯಿತು. ಇನ್ನು ಎಲ್ಲರೂ  ಆತುರದಿಂದ  ಕಾಯುತ್ತಿರುವ  ಸಂಗೀತ   ಪ್ರಾರಂಭ ,ವೇದಿಕೆಮೇಲಿದ್ದ   ಕಲಾವಿದ,.  ಪ್ರೇಕ್ಷಕರ  ನಡುವಿನ ಅಂತರ, ಸ್ಟೇಜ್, ಸಭಾಗ್ರಹದ  ಸುವ್ಯವಸ್ಥೆ  ಕುರಿತಾಗಿ  ಶ್ರೀ ಅಭ್ಯಂಕರರು ತಮ್ಮ ಮೆಚ್ಚುಗೆ ಸೂಸುತ್ತಾ  ರಾತ್ರಿ 7-30 ಕ್ಕೆ ರಾಗ್” ಯಮನ”  ಮೂಲಕ ನಮ್ಮನ್ನೆಲ್ಲ ಸಂಗೀತ  ಲೋಕಕ್ಕೆ ಕರೆದೊಯ್ಯಲು  ಪ್ರಾರಂಭಿಸಿದರು . ಈ  ರಾಗದ ವಿಸ್ತಾರ, ಅದರಲ್ಲಿ ಎಳೆ  ಎಳೆಯಾಗಿ ತಮ್ಮ  ಎಲ್ಲ ವಿದ್ವತ್ತನ್ನು ಹಂತ ಹಂತವಾಗಿ  ಪ್ರದರ್ಶನ ಮಾಡಿದರು . ಮನಕ್ಕೆ ಮುದ  ನೀಡಿದ  ಅವರು ಹಾಡಿದ ರೀತಿ ಅವರ್ಣನೀಯ,ತದ  ನಂತರ   ರಾಗ .”ರಾಗೆಶ್ರೀ ” ಸಹ ನಮ್ಮನ್ನು ಗಂಧರ್ವ ಲೋಕಕ್ಕೆ  ಎಳೆದೊಯ್ಯಿತು .

Srisi- Saptaka-Abhyankara

ಮಧ್ಯದಲ್ಲಿ  ಸಂಗೀತಕ್ಕೆ ವಿರಾಮ ನೀಡಿ  ” ಸ್ವರಗಳು ಹಾಗು ಸಂಗೀತಗಾರನ   ನಡುವೆ ಚರ್ಚಾ  ರೂಪದಲ್ಲಿ ಉಂಟಾಗುವ  ಸಂವಾದಗಳ ಕುರಿತಾಗಿ,  ನೀಡಿದ ಉಪನ್ಯಾಸ  ಪಾಮರನಿಗೂ  ತಿಳಿಯುವಂತೆ ಇತ್ತು . ಕ್ರಿಕೆಟ ಆಟದಲ್ಲಿ ಮೊದಲಿನ ಆಟಗಾರರು ಕಲಾತ್ಮಕವಾಗಿ  ಆಡಿ  ಭದ್ರ ಅಡಿಪಾಯ  ಹಾಕಿದ ನಂತರ  ಕೊನೆಯ ಒವೆರಗಳಲ್ಲಿ  ಯುವರಾಜ್, ಅಂಥ  ದಾಂಡಿಗರು ಧನಾಧನ್  ಎಂದು ಸಿಕ್ಸರ್ ಬಾರಿಸುವಂತೆ  ಸಂಗೀತವನ್ನು ನಾವು ವಿಸ್ತರಿಸಬೇಕಾಗುತ್ತದೆ ,ಚಿತ್ರ ಪಟ ಚೆನ್ನಾಗಿ ಮೂಡಿ ಬರಲು ನಟ / ನಟಿ ಬರಿ ಸುಂದರವಾಗಿದ್ದರೆ  ಸಾಲದು  ಅವನಿಗೆ/ಳಿಗೆ  ಉತ್ತಮ ನಟನೆ ಸಹ  ಮಾಡುವ  ಅವಶ್ಯಕತೆ ಇದೆ , ಹಾಗಾದಲ್ಲಿ ಮಾತ್ರ  ಸುಂದರ ಕೃತಿ . ಉತ್ಕೃಷ್ಟ  ಸಂಗೀತ ಹೊರ ಹೊಮ್ಮುವದು  ಸಾಧ್ಯ  ಎಂದು ಮನನೀಯವಾಗುವಂತೆ  ತಿಳಿಸಿದರು .
.
ತಾವು  ಹಾಡಿದ ಒಂಭತ್ತು ತಾಸುಗಳಷ್ಟು ರಾಗ, ಭಜನೆ, ಅಭಂಗಗಳನ್ನು sanjeevabhyankar.com   ಎಂಬ  ತಾಣದಲ್ಲಿ ಅಪ್-ಲೋಡ್  ಮಾಡಿದ್ದಾಗಿಯೂ  ಇವನ್ನು ಉಚಿತವಾಗಿ ಡೌನ್ ಲೋಡ್  ಮಾಡಿಕೊಳ್ಳಬಹುದಾಗಿದೆ , ಎಂದು ತಿಳಿಸುತ್ತ, ತಾವು ಇಂದು ಫುಲ್ ಮೂಡಿನಲ್ಲಿದ್ದು  ಇನ್ನೂ ಮೂರು ಹಾಡುಗಳನ್ನು ಅನ್ನುವದಾಗಿ ತಿಳಿಸುತ್ತ ಮೊದಲು ‘ಮೋಹನ  ಖೇಲತ ಹೋಲಿ ‘ ಎಂಬ ಹೋಳಿ ಹಾಡನ್ನು ಪ್ರಸ್ತುತ ಪಡಿಸಿ ಮುಂದೆ ಎರಡು  ಸಂತ  ತುಕಾರಾಮರ ಅಭಂಗ  ಹಾಡಿದರು, ಮೊದಲನೆಯ ಅಭಂಗ ‘ ಬೋಲವಾ  ವಿಠಲ , .. ಪಹಾವಾ  ವಿಠಲ , ಕೊನೆಯದಾಗಿ  ಭೈರವಿ ರಾಗದಲ್ಲಿ  ಪಾಂಡುರಂಗನ ಚರಣಗಳನ್ನು ನೆನೆಯುತ್ತ “ಅತ್ಥಾ  ಕೊಟ್ಥೆ  ಜಾವೆ ” ಎನ್ನುತ್ತಾ ನಮ್ಮೆಲ್ಲರ ಮುಂದೆ ಫ್ರತ್ಯಕ್ಷ ಪಾಂಡುರಂಗನನ್ನೇ  ತಂದು ನಿಲ್ಲಿಸಿದರು.
.
ಇಂತಹ  ಅದ್ಭುತ ಗಾಯನ, ಈ. ಸಹವಾದನಗಳು  ಗಡಿನಾಡುಗಳ  ಮನಸ್ಸುಗಳನ್ನು  ಬೆಸೆಯಲು ಸಹಕಾರ  ನೀಡಿದ ಎರಡೂ ಸಂಸ್ಥೆಗಳಿಗೆ
ಉಪಸ್ಥಿತರಿದ್ದ   ನಾವೆಲ್ಲರೂ ಹಾರ್ದಿಕ ಅಭಿನಂದನೆ ಸಲ್ಲಿಸುತ್ತೇವೆ.
.
– ರಂಗಣ್ಣ ಕೆ. ನಾಡಗೀರ್ , ಹುಬ್ಬಳ್ಳಿ
.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ  : ಶಿರಸಿಯಲ್ಲಿ ‘ಸಪ್ತಕ’.. ಸಂಗೀತ.. ಸಂಧ್ಯಾ ಕಾರ್ಯಕ್ರಮ: ಭಾಗ-1
.

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: