ಕಾಡುವ ಪ್ರಶ್ನೆ(?)

Share Button

Ashok Mijar4

ತಂದೆ ತಾಯ ಮೊಗವ ಕಾಣದ

ಸಂಬಂದಗಳ ಎಂದೂ ಅರಿಯದ

ಮುಗ್ಧ ಜೀವದ

ಬವಣೆಯ ತಿಳಿದವರಾರು?

 

ಮಳೆಯೂ ಇಲ್ಲದ, ಬೆಳೆಯೂ ಇಲ್ಲದ

ಸುರಿದ ಬೆವರಿಗೆ ಬೆಲೆಯೂ ಇಲ್ಲದ

ಬೆಂದ ಜೀವದ

ಬವಣೆಯ ಅರಿತವರಾರು?

 

ಕಾಲಿಲ್ಲ ಕೈಯಿಲ್ಲ, ಅಂಗಾಗ ಸರಿಯಿಲ್ಲ

ಭಿಕ್ಷೆಯೆತ್ತದೆ ಬೇರೆ ವಿಧಿಯಿಲ್ಲ

ಪಾಪದ ಜೀವದ

ಬವಣೆಯ ತಿಳಿದವರಾರು?

 

ಯಾರು ಹೇಗಿದ್ದರೂ, ಚಿಂತೆಯಿಲ್ಲದ

ಧನ ಕನಕ ಎಂದೂ ಬತ್ತದ

ಸಿರಿವಂತ ಜೀವದ

ಚರಿತೆಯ ಬಲ್ಲವರಾರು?

 

ಅನಾಥ, ರೈತ, ರೋಗಿ, ಭೋಗಿಎಲ್ಲರೂ

ಪರಮಾತ್ಮನ ಆಟದ ಭಾಗಿ

ಜೀವನ್ಮರಣದ

ಮರ್ಮವ ಬರೆವವರಾರು? ಬಲ್ಲವರಾರು?

question mark1

 

ಅಶೋಕ್ ಕೆ. ಜಿ. ಮಿಜಾರ್.

1 Response

  1. jayashree B kadri says:

    ಆಶಯ ಚೆನ್ನಾಗಿದೆ ಅಶೋಕ್.

Leave a Reply to jayashree B kadri Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: