ವಿಶ್ವ ಜಲ ದಿನ…

Share Button

ನೀರು..ನೀರು,,,
ನೀರು ನೀರು ನೀರ ಜೊತೆ
ಸಂಬಂಧ ಅವಿನಾಭಾವ
ಹಾಹಾಕಾರ ನೀರಿಗೆ
ಎಲ್ಲೆಲ್ಲೂ ನೀರ ಅಭಾವ,,

ನಗರಗಳಲಿ ಕಾವೇರಿದಾಗ
ಕಾವೇರಿ, ಜಲಮಂಡಳಿಯ ಸಿಹಿನೀರು,
ತೊಳೆಯಲು ಕೊಳವೆ
ಬಾವಿಯ ಉಪ್ಪು ನೀರು,,

ಬಯಲ ನಾಡಲ್ಲಿ
ನದೀಪಾತ್ರದ, ಗುಂಡಿಗೆ
ಅದುರುವಂತೆ ಗುಂಡಿ
ತೋಡಿದರೂ ಬರದ ನೀರು,,

ಬಾಯಾರಿ ಬಂದವರಿಗೆ
ಬೆಲ್ಲದ ಜೊತೆ ನೀಡಲು ನೀರಿಲ್ಲ
ಬರಿದೇ ಬಾಯಿ ಮಾತಿನ
ಹಲ್ಲು ತೋರುವ ಕಾರುಬಾರೆಲ್ಲ,,

ಬಗೆಬಗೆದು ತೆಗೆಯೆ ಅಂತರ್ಜಲ,
ಜಲವನೂಡಿಸುವ ಭೂಮಿಯೇ ಬತ್ತಿರುವಳು
ಭೂಮಿ ತಾಯಿಯೇ ಬಾಯಾರಿರಲು
ಕೊಡುವರಾರು ನೀರೆಮಗೆ?

ಗಂಗೆ,ತುಂಗೆ,ಕಾವೇರಿಯರು
ವರುಣನಿರದೇ ಒಂಟಿಬಾಳು
ತುಂಗಭದ್ರೆ,ಕೃಷ್ಣೆ ಗೋದಾವರಿಯರೂ
ಜಂಟಿಯಾದರೂ ಒಳಹರಿವಿಲ್ಲ,,

ಮೃಗ ಪಕ್ಷಿಗಳ ಗೋಳು ಕೇಳೋರಿಲ್ಲ
ಬಾವಿಗಳಲಿ ನೀರಿಲ್ಲ,ನದೀಪಾತ್ರಗಳು
ಬತ್ತಿರಲು ದನಕರುಗಳು ಮೀಯುವುದಿರಲಿ
ಕೆರೆಗಳಲಿ ಕುಡಿಯಲೂ ನೀರಿಲ್ಲ ,,

ಬೆಳೆಗಳಿಗೂ ನೀರಿಲ್ಲ
ರೈತರೂ ಕೈ ಚೆಲ್ಲಿಹರಲ್ಲ
ಇಳೆಗೂ ನೀರಿಲ್ಲ , ಅವಳ
ಕೊಳೆಯನು ತೊಳೆಯಲು ನೀರಿಲ್ಲ ,,

ನೀರಿಲ್ಲದ ಬೇಗೆಯಲ್ಲಿ ಅಲ್ಲಲ್ಲಿ
ಒಂದೇ ಬೊಗಸೆ ನೀರಿಡಿ ಎಲ್ಲಾ
ಬಾಯಿಲ್ಲದ ಪ್ರಾಣಿಪಕ್ಷಿಗಳ
ಜೀವಕೆ ಅವರ ಹಕ್ಕಿನ ನೀರಿಡಬೇಕಲ್ಲ,,

– ಸುಮಿ

1 Response

  1. Shankara Narayana Bhat says:

    ವಿಶ್ವಜಲದಿನಕ್ಕೆ ಉಚಿತವಾದ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: