ಕೈಗಾದಲ್ಲಿ ಕಥಾಯಾನ

Share Button

ಕಾಳೀನದಿ ತೀರದಲಿ
ತುಂಬು ಹಸಿರು ಮಡಿಲಿನಲಿ
ಕವಿಹೃದಯ ಕವಿನಮನ
ನಡೆಯಿತದೊ “ಕಥಾಯಾನ”

ಸುರಿಯುತಿರೆ ಮಳೆಯ ಹನಿ
ಎಡೆಬಿಡದೆ ಸ್ಫೂರ್ತಿ ಹನಿ
ಸಾಗಿಬರೆ ಶಿಬಿರದಲಿ
ಆತ್ಮಬಲ ತುಂಬುತಲಿ

ಸಂಪನ್ಮೂಲ ವ್ಯಕ್ತಿಗಳು
ಸತ್ಪಥಕೆ ಸೊಡರುಗಳು
ದೃಶ್ಯ ಕಾವ್ಯಗಳ ಸೊಗಸು
ತುಂಬಿತವು ನಮ ಮನಸು

ಪರಮಾಣು ಶಕ್ತಿಯದು..
ಮಾನವನ ಯುಕ್ತಿಯದು..
ಮೇಳೈಸೆ ಕೈಗಾದಲಿ
ಅಣುವಿದ್ಯುತ್ ಸ್ಥಾವರದಲಿ

ವಿವಿಧ ಜೀವಿಗಳ ಉಳಿವು
ಪಕ್ಷಿಸಂಕುಲಗಳ ನೆಲೆಯು
ಮನುಜಕುಲಕುಪಯೋಗ
ಅಭಿವೃದ್ಧಿಪಥ..ಮಹಾಯಾಗ!

-ಶಂಕರಿ ಶರ್ಮ, ಪುತ್ತೂರು.

4 Responses

  1. Ranganath Nadgir says:

    Samayochitawada sundara Kavana, Dhanyawada,

  2. ಶಂಕರಿ ಶರ್ಮ says:

    ಧನ್ಯವಾದಗಳು ಸರ್.

    • ಎಸ್ ಎ ಕಾಂತಿ, ಕೈಗಾ says:

      ಭಗಿನಿ ಶ್ರೀಮತಿ ಶಂಕರಿ ಶರ್ಮರವರೇ ನಿಮ್ಮ ಕವನ ಅದ್ಭುತವಾಗಿ ಮೂಡಿಬಂದಿದೆ. ಶುಭವಾಗಲಿ.

  3. upskumar says:

    ಉತ್ತಮ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: