ಕಾಶ್ಮೀರ ಕಣಿವೆಯಲಿ…

Share Button

ಭೂಸ್ವರ್ಗ ಕಾಶ್ಮೀರ ಭಾರತಮಾತೆಯ ಶಿರವು
ನಿಸರ್ಗ ಚೆಲುವಿನ ಸೊಗಸು ವರ್ಣಿಸಲಸದಳವು
ಕಾಶ್ಮೀರಿಗಳದು ಸಹಜ ಮುಗ್ದ ಸುಂದರ ನಗುವು
ಕಷ್ಟ ಸಹಿಷ್ಣುತೆಯ ಭಾವದಲಿ ಅರಳಿ ಮೊಗವು

ಸ್ವಾತಂತ್ರ್ಯ ಪಡೆಯುತಲೆ ವಿಭಜನೆಯು ಆಗುತಲಿ
ನೆರೆ ರಾಷ್ಟ್ರ ಪಾಕ್ ಆಗಿ ತಾನೆ ಬೀಗತಲಿ
ಸುಂದರ ಕಾಶ್ಮೀರದಲಿ ಆಳ್ವಿಕೆಯ ಆಸೆಯಲಿ
ಸಮರವನು ಸಾರುತಿದೆ ಕಾಲಕಾಲದಲಿ

ಭಯೋತ್ಪಾದಕರ ತಂಡ ಎಲ್ಲೆಲ್ಲು ಹರಡಿರಲು
ಮುಗ್ಧ ಮನಗಳಲಿ ಸದಾ ಭಯ ತುಂಬಿ ಹರಿದಿರಲು
ಶಾಂತಿ ನೆಮ್ಮದಿಯ ನೆಲೆ ಭಯದ ಬೀಡಾಗಿರಲು
ರಕ್ತದೋಕುಳಿಯಾಟ ರಾಕ್ಷಸರು ಆಡಿರಲು

ವೀರಯೋಧರ ದಿಟ್ಟ ಸಾಹಸದ ಕಾರ್ಯದಲಿ
ನೀಚ ಹಂತಕರ ದಿನವೂ ಹತ್ತಿಕ್ಕಿ ಸಾಗುತಲಿ
ವೀರ ಮರಣದ ಸುದ್ದಿ ಸಿಡಿಲಿನಂತೆರಗುತಲಿ
ಮಾತೆ ಸತಿಯರ ಕಂಬನಿ ತುಂಬಿ ಹರಿಯುತಲಿ

ಅಶ್ರುತರ್ಪಣವಿದೋ ಆ ಧೀರ ಕುವರರಿಗೆ
ಮಾತೆ ಭಾರತಿಯ ಆ ಮುದ್ದು ಕಂದಮ್ಮಗಳಿಗೆ
ಕೆಚ್ಚೆದೆಯ ಕಿಚ್ಚನ್ನು ಸದಾ ಬೆಳಗಿದವರಿಗೆ
ಹೆಜ್ಜೆ ಹೆಜ್ಜೆಗು ದೇಶಭಕ್ತಿ ಮೆರೆದವರಿಗೆ

–  ಶಂಕರಿ ಶರ್ಮ, ಪುತ್ತೂರು.

2 Responses

  1. Nayana Bajakudlu says:

    ನರರಾಕ್ಷಸರ ಹುಟ್ಟಡಗಿಸಬೇಕೆಂಬ ಕಿಚ್ಚು ಮನದ ತುಂಬಾ

  2. Vasanth Shenoy says:

    Jai Hind

Leave a Reply to Vasanth Shenoy Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: