ವೀರ ಪುಲ್ವಾಮ ಯೋಧರೇ….

Share Button

ಮನೆ ಮಂದಿಯ ತೊರೆದಿರೇಕೆ
ದೇಶ ಸೇವೆಯ ಅರಸಿದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ 
ಎನದೆ ಹುತಾತ್ಮರಾಗಿ ಹೋದಿರೇಕೆ …

ಹೊನ್ನು ಹಣ ಕಡೆಗಾಣಿಸಿದಿರೇಕೆ
ದೇಶದ ಋಣವ ತೀರಿಸಿದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …

ಸುಖ ಲಾಲಸೆ ಬೇಡವೆಂದಿರೇಕೆ
ದೇಶ ಭಕ್ತಿಯ ಮೆರೆದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …

ಜಾತಿ ಧರ್ಮ ಎಣಿಸಲಿಲ್ಲವೇಕೆ
ದೇಶಕೆ ಕುಲವೊಂದೆ ಎಂದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …

ಉಸಿರ ಹಂಗ ನೀಗಿದಿರೇಕೆ
ದೇಶ ವಾಸಿಗಳ ಸಲಹಿದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …

ಬೇಗೆ ಬವಣೆಯ ಭರಿಸಿದಿರೇಕೆ
ದೇಶ ಕಾಯ್ವ ಹೊಣೆಯ ಹೊತ್ತಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …

ಕ್ರೂರ ಜಗವಿದೆಂದು ಅರಿಯಲಿಲ್ಲವೇಕೆ
ದೇಶದ ಮಕ್ಕಳಿಗಾಗಿ ದೇಹವೆಂದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …

ಬದುಕ ಭೂಮಿಗೆ ಮೀಸಲಾಗಿಸಿದಿರೇಕೆ
ದೇಶ ಭಾರತವೆ ಉಸಿರೆಂದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …


-ಭಾರತಿ ಪಿ.ಜಿ

1 Response

  1. Nayana Bajakudlu says:

    ಕೇಳಲೇ ಬೇಕಾದ ಪ್ರಶ್ನೆಗಳು. ಪುಲ್ವಾಮಾ ಘಟನೆ ಎಂತಹವರನ್ನು ಕಣ್ಣೀರು ಮಿಡಿಯುವಂತೆ ಮಾಡಿದೆ .

Leave a Reply to Nayana Bajakudlu Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: