ಪ್ರೇಮ ಲಹರಿ

Share Button

ಕಾಣದ ವಿಧಿ ಬರಹ,
ಕೃಷ್ಣ ಪ್ರೀತಿಯಲ್ಲಿ ತುಂಬಿಹ ವಿರಹ,
ಯಾರಿದ್ದರೂ ಸನಿಹ,
ಆವರಿಸಲಿಲ್ಲ ರಾಧೆ ….
ಕೃಷ್ಣನ ಹೃದಯ ಬೇರಾರೂ
ನಿನ್ನ ವಿನಹ .

ಸಮೃದ್ಧಿಯ ಹೊತ್ತ ಕಾನನ,
ಜಗದೋದ್ಧಾರನ ವೃಂದಾವನ,
ಅದರೊಳಗೆ ಮುರಳಿಯ ಗಾನ,
ಹೇಗಾಗದಿರಳು ರಾಧೆ
ಜಗವ ಮರೆತು ಲೀನ ??.

ನಾರೀಮಣಿಯರ  ಹೃದಯ
ದೊಳಗಡೆ ಸದಾ ಗಿರಿಧರನೇ ಒಡೆಯ,
ಮುನಿಸೇಕೆ ರಾಧೆ…..?
ಕಾಣೊಮ್ಮೆ ಈ ಸ್ತ್ರೀ ಲೋಲನ ಕಣ್ಣ ಕನ್ನಡಿಯ,
ನೀನೇ ತುಂಬಿರುವೆ ಚೆಲ್ಲುತಾ ಹೂನಗೆಯ.

ರಾಧೆಯೇ ಕೃಷ್ಣನ ಪ್ರೇಮ,
ಎತ್ತಿ ಬಂದರೂ ಹಲವು ಜನುಮ,
ಈ ಜೋಡಿಯ ಕಂಡು ಪಡದವರಾರು ಸಂಭ್ರಮ?,
ಈ ಪ್ರೇಮ ಸುಧೆಗೆ  ಸಾಕ್ಷಿ
ಹುಣ್ಣಿಮೆಯ ಹಾಲ್ಬೆಳದಿಂಗಳ ಚೆಲ್ಲೋ ಆ
ಬಾನಂಗಳದ ಚಂದ್ರಮ.

ಸರಿಯೋ ಯುಗ ಯುಗಗಳಾಚೆಗೂ ಅಮರ,
ರಾಧಾ-  ಮಾಧವರ ಪ್ರೇಮದಿಂಚರ,
ಕೊಳಲ ನಾದದಲೇ ಸೆಳೆಯೋ ಮೋಡಿಗಾರ,
ಅವನ ನೆನಪೂ ಆ ಲಹರಿಯಂತೆ
ಸಿಹಿ, ಮಧುರ.

– ನಯನ ಬಜಕೂಡ್ಲು

7 Responses

  1. Krishnaprabha says:

    ಕೃಷ್ಣ- ರಾಧೆ….ಇವರ ನಡುವಿನ ಪ್ರೀತಿಯನ್ನು ಬಣ್ಣಿಸಿದೆ ಈ ಕವನ …..
    ಅಭಿನಂದನೆಗಳು ನಯನಾರಿಗೆ….

  2. Shruthi Sharma says:

    ಕವನ ಬಹಳ ಉತ್ತಮವಾಗಿದೆ 🙂

  3. Shankari Sharma says:

    ಚಂದದ ಕವನ.

Leave a Reply to Krishnaprabha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: