ನಡೆ ಮುಂದೆ

Share Button

ಕೂರದಿರು ಮೂಲೆ ಗುಂಪಾಗಿ
ಮಂಕು ಬಡಿದಂತೆ ,
ಬದುಕು ಸದಾ ಪ್ರವಾಹಿ
ಹರಿಯೋ ನದಿಯಂತೆ .

ನಿಜ …. ಒಂಟಿ ಕೈಯ್ಯಿಂದ
ತಟ್ಟಲಾಗದು ಚಪ್ಪಾಳೆ,
ಮನ ಬಯಸುವುದು ಆಸರೆ
ತುಸು ದೂರ ಸಾಗುವಾಗ
ಬಿಸಿಲು ಸರಿದು ಇಳಿ ಸಂಜೆ
ಕಾಲಿಡೋ ವೇಳೆ .

ಬದುಕಾಗದಿರಲಿ ನಿರೀಕ್ಷೆಗಳ
ಆಗರ,
ದೊರೆತ ಕ್ಷಣವ ದೊರೆತಂತೆಯೇ
ಸವಿಯುವುದರಲ್ಲಿಹುದು
ಸಂತಸದ ಸಾರ.

ಸಹಜ ತೋರುವುದು ತನ್ನ ಕರಾಳ
ಮುಖಗಳ ಸೋಲು,
ಹಾಗೆಂದು ನಿಲ್ಲದಿರು ಕಳೆದುಕೊಂಡು ಭರವಸೆ
ನೀ ಎಲ್ಲೂ.

ಒಂದೇ ತರ ಇರದಿಲ್ಲಿ
ಎಲ್ಲರ ಬದುಕು ,
ಇರುಳು ಸರಿದ ನಂತರವೇ
ಮೂಡುವುದು ಬೆಳಕು.

ಯಾರಿಲ್ಲದಿದ್ದರೇನು ಸಾಗು
ದೂರ ದೂರದವರೆಗೂ ಒಂಟಿಯಾಗಿ,
ಹಿಂದಿರುಗಿ ನೋಡಲೊಮ್ಮೆ ಸಾಗಿ ಬಂದ
ಹಾದಿ
ಬೆಳೆದಿರುವೆ ನಿನಗರಿವಿಲ್ಲದಂತೆಯೇ
ಗಟ್ಟಿಯಾಗಿ .

ಬಿಡು ಭಯ
ಮುಕ್ತ  ಮನಸಾಗಿದ್ದಲ್ಲಿ ಕಾರಣವಿಲ್ಲದೆಯೇ
ಬೆಸೆಯುವುದು ಸ್ನೇಹ ಬಂಧನ,
ಭದ್ರವಾಗಿರಿಸು ಹೃದಯದ
ತಿಜೋರಿಯೊಳಗೆ
ಈ ಸುಂದರ ನೆನಪುಗಳನ್ನ.

ಕೂರದಿರು ಯಾವ ಸಂಬಂಧಗಳ
ಸಲುವಾಗಿಯೂ ನೀ
ಅಳುತ್ತಾ ,
ಬಿಟ್ಟು ಬಿಡು ನಿರಾಳವಾಗಿ
ಅದೃಷ್ಟವಿದ್ದಲ್ಲಿ ಹಿಂತಿರುಗಿ ಬರುವುದದು
ಮತ್ತೆ ನಿನ್ನತ್ತ .

–  ನಯನ ಬಜಕೂಡ್ಲು

8 Responses

  1. Shruthi Sharma says:

    ಬಹಳ ಸ್ಫೂರ್ತಿದಾಯಕ ಕವನ

  2. Hema says:

    ‘ನಡೆ ಮುಂದೆ, ನುಗ್ಗಿ ನಡೆ ಮುಂದೆ’…ಈ ದಿನಗಳ ಆದ್ಯತೆ, ಸ್ವಾಮಿ ವಿವೇಕಾನಂದರ ಆಶಯ ಕೂಡ. ಸುಂದರ ಕವನ’

  3. Shankari Sharma says:

    ಬದುಕಲ್ಲಿ ಭರವಸೆ ತುಂಬುವ ಕವನ…ಚೆನ್ನಾಗಿದೆ.

  4. Anitha Lakshmi says:

    ಸೋತವರಿಗೆ ಧೈರ್ಯ ತುಂಬುವ,ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರಿಗೆ ಹುಮ್ಮಸ್ಸು ನೀಡುವಂತಹ ಕವನ

  5. Kala Bhagwat says:

    ಚೆಂದವಾಗಿದೆ

Leave a Reply to Shruthi Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: