ಹಚ್ಚೋಣ ಹಣತೆ

Share Button

ಹಚ್ಚೋಣ ಹಣತೆ ಪ್ರೀತಿ ತೈಲವ ಎರೆದು
ಬೆಳಗೊಣ ಬದುಕ ಬೆಳೆದ ಹತ್ತಿ ವಸೆದು
ಹೃದಯ ಸಂಗಮಕೆ ಹಬ್ಬಗಳ ಹಾವಳಿ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ
.
ಪಟ್ ಪಟ್ ಪಟಾಕಿ ಸುಟ್ಟು ಸಿಡಿಸದೆ
ಚೆಂದದ ಪರಿಸರ ಶೋಕಿಗೆ ಕೆಡಿಸದೆ
ಹಟ್ಟಿಲಕ್ಕವ್ವನ ಹೂಗಿಡದಲಿ ಶೃಂಗರಿಸಿ
ಸಾಲುದೀಪದಿ ಮನೆ ಮನಗಳ ಬೆಳಗಿ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ
.
ಹಿರಿಯರ ಪೂಜಿಸಿ ಭಕ್ತಿಯಲಿ ನೆನೆಯೋಣ
ಸಂಸ್ಕೃತಿಗಳನು ಮುನ್ನೆಡೆಸಿ ಉಳಿಸೋಣ
ಜ್ಞಾನಕ್ಕೆ ಸುಜ್ಞಾನದ ಬೆಳಕನ್ನು ಬೆಳಗೋಣ
ಕತ್ತಲೆಯ ಜಗಕೆ ಜ್ಯೋತಿಯೇ ಆಗೋಣ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ
.
ಬದುಕೆಂಬುದು ಬಹುಸುಂದರ ಪಯಣ
ಅನುಭವವ ಪಡೆದೆಲ್ಲಾರು ನಡೆಯೋಣ
ಕಷ್ಟ ಕಾರ್ಪಣ್ಯಗಳನೆಲ್ಲಾ ಮೆಟ್ಟಿ ನಿಲ್ಲೋಣ
ಸುಖದಿ ನೂರ್ಕಾಲ ಒಟ್ಟಾಗಿ ಬದುಕೋಣ
ಆಚರಿಸೋಣ ಬನ್ನಿ ಒಲವಿನ ದೀಪಾವಳಿ

.

-ಶಿವಾನಂದ್ ಕರೂರ್ ಮಠ್ , ದಾವಣಗೆರೆ.

5 Responses

  1. ಅರ್ಥಪೂರ್ಣ ಕವಿತೆ ಸರ್

  2. Anonymous says:

    ತುಂಬ ಸ್ಫೂರ್ತಿ ಸಿಗಲಿದೆ ಈ ಕವಿತೆಯಲಿ

  3. Suni says:

    Superb sir it’s very nice sir

  4. ನಯನ ಬಜಕೂಡ್ಲು says:

    ಬದುಕೆಂಬುದು ಸುಂದರ ಪಯಣ,
    ನಗು ನಗುತ್ತಾ ಎಲ್ಲರ ಜೊತೆ ಅದನ್ನು ಕಳೆಯೋಣ ,

    ಚೆನ್ನಾಗಿದೆ ಸರ್ ಕವನದ ಸಾರ

  5. Shankari Sharma says:

    ದೀಪಾವಳಿ ಆಚರಣೆಗೆ ಸೊಗಸಾದ ಕವನ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: