ಬದುಕು ಭರವಸೆ 

Share Button


ಬದುಕು ಭರವಸೆಯೊ, ಬವಣೆ ಕಿತ್ತೆಸೆಯೊ,
ಚೈತನ್ಯದ ಬಾಳಿಗೆ ಸಿಹಿನೆನಪುಗಳ ಹೊಸೆಯೊ………

ಹೊಸ ಚಿಗುರಿಗಾಗಿ ಕತ್ತರಿಸುವರು ಗಿಡವ,
ನೀನೇಕೆ ನೆನೆದು ನೆನೆದು ಕೊರಗುವೆ ಹಳೆ ನೋವ?
ಹೊಲಸುಗೈದ ಕೂಸ ಕತ್ತು ಹಿಸುಗುವಳೇ ತಾಯಿ?
ಗೈದ ತಪ್ಪು ತಿದ್ದಿ ನಡೆದರೆ ನೀನೇ ಚಿರಸ್ಥಾಯಿ………
.
ತುಳಿದರೇನು? ಕಡಿದರೇನು? ಮರಳಿ ಮರಳಿ ಬೆಳೆದಿದೆ,
ಯಾವುದಕೂ ಬಗ್ಗದಿರುವುದಕೆ ಇಂದು ಅದರ ನೆರಳಿದೆ,
ನೋಡು ತಿರುಗಿ ಹಿಂದೆ, ಆದರೆ ನೋವ ಪಡುವುದಕಲ್ಲ,
ಕಲಿತ ಪಾಠ ಸಾವಿರಾರು, ಅದನು ನೀನು ಮರೆಯುವಂತಿಲ್ಲ……..
.
ಮಾತನಾಡದ ಪ್ರಾಣಿಗಳ ಕಣ್ಣೀರ ಯಾರೂ ಅರಿತಿಲ್ಲ,
ಹಾಗಂತ ಅವುಗಳು ಕೊರಗುತ ಕುಳಿತಿಲ್ಲ,
ದುಡಿಯುತಿಹವು ಪ್ರತಿದಿನ ಅದು ಅವುಗಳ ಸ್ವಭಾವ,
ಸರ್ವಶಕ್ತ ಮನುಜ ನೀನು, ನಿನಗ್ಯಾವ ಅಭಾವ?…..
.
ಬದುಕು ಭರವಸೆಯೊ ಬವಣೆ ಕಿತ್ತೆಸೆಯೊ,
ನಗುವೆಂಬ ವರ ಉಂಟು ಅದು ನಿನ್ನ ದೆಸೆಯೊ,
ನಗುತಲಿರುವ ವ್ಯಕ್ತಿತ್ವ ಎಂದೆಂದಿಗೂ ಚೈತನ್ಯ,
ನಗುನಗುತ ಬಾಳಿದಾಗಲೇ ನಾವು ಅನನ್ಯ……..

.

– ವಿದ್ಯಾಶ್ರೀ ಬಿ. ಬಳ್ಳಾರಿ

4 Responses

  1. ನಯನ ಬಜಕೂಡ್ಲು says:

    ಸುಂದರವಾದ ಕವನ . ಎಲ್ಲೂ ಸೋತು ನಿಲ್ಲಬೇಡ ನಿರಂತರ ಸಾಗುತ್ತಿರು ಅನ್ನುವ ಸಂದೇಶವನ್ನು ನೀಡುವ ಸಾಲುಗಳು , ಜೊತೆಗೆ ಭರವಸೆಯ ಬೆಳಕು .

  2. Shankari Sharma says:

    ಬಾಳಿನಲ್ಲಿ ಭರವಸೆ ಮೂಡಿಸುವ ಸುಂದರ ಕವನ.

  3. Ubaidulla says:

    ಕವನ ತುಂಬಾ ಇಷ್ಟವಾಯಿತು

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: