ಕೊರೊನ

Share Button
ಕೊರೊನ ಕಾಡುತಿದೆ
ಹೃದಯ ನಡುಗುತಿದೆ
ಒಲುಮೆಯ ಮರೆತು
ಮನ ಬಿಕ್ಕಿ ಚೀರುತಿದೆ..!!
.
ಗಾಳಿ ಬೀಸುತಿದೆ
ಪ್ರಾಣವ ಹಿಂಡುತಿದೆ
ಮುಗ್ದ ತನುಗಳ ಹಿಡಿದು
ನಿರ್ದಯದಿ ಕೊಲ್ಲುತ್ತಿದೆ..!!
.
ರಕ್ಕಸ ಕ್ರಿಮಿ ನುಸುಳುತಿದೆ
ಶ್ವಾಸಕೋಶವ ಸೇರುತ್ತಿದೆ
ಎದೆಯ ತಿಂದು ಇಡೀ ಘನ
ಕಾಯವ ಉರುಳಿಸುತ್ತಿದೆ ..!!
.
ನೆಗಡಿಯೇನು ಹೊಸದೆ
ಹಸುಗೂಸಿನಿಂದಿಹುದೆ
ಕ್ಷಮತೆಯ ತಪ್ಪಿಸಿ ಇಂದು
ಮಸಣದ ಹಾದಿ ಹಿಡಿಸಿಹುದೆ..!!
.
ಅಭಿಲಾಷೆಯ ಕಸವದು
ತಲೆಯ ಹೊಕ್ಕುತಿನ್ನುತ್ತಿದೆ
ನಿರಾಯಾಸದೆ ತನುವ
ಕೊಂದು ಮುಂದೋಗುತ್ತಿದೆ..!!
.
ಅನಕ್ಷರಸ್ಥನವ ಮತಿಹೀನ
ಸ್ವಚ್ಛತೆ ಮರೆತು ಸಾಯುತಿರೇ
ಉಳಿಸಲೆತ್ನಿಸಿದ ದೈವನವ
ಬಿಮ್ಮನೆ ಕುಳಿತು ನಗುತಲಿರೆ..!!
ಮದುವೆಗೋ ಮಸಣಕೋ ಈ ತನುವು..!!??!!.

-ಗೋವಿಂದ್ ರಾಜು ಬಿ.ವಿ.ಗೌಡ

3 Responses

  1. Krishnaprabha says:

    ಹಲವು ಅಕ್ಷರಸ್ಥರೂ ಮತಿಹೀನರಂತೆ ತೋರುತಿಹರು

  2. ನಯನ ಬಜಕೂಡ್ಲು says:

    ಇಂದು ಜಾಗೃತೆ ಮಾಡಿ ಬದುಕಿ ಉಳಿದರೆ ನಾಳೆ ಸಂಭ್ರಮಿಸಬಹುದು, ಮದುವೆ, ಉತ್ಸವಗಳ ಸಂಭ್ರಮ,
    ಅದಲ್ಲದೆ ಎಗ್ಗು ಸಿಗ್ಗಿಲ್ಲದೆ
    ಉದ್ದಟತನ ತೋರಿದಲ್ಲಿ
    ಕೈ ಬೀಸಿ ಕರೆಯಬಹುದು ಮಸಣ.

    ಪ್ರಸ್ತುತ ಪರಿಸ್ಥಿತಿಯ ಅನಾವರಣ, ಚೆನ್ನಾಗಿದೆ ಕವಿತೆ.

  3. Shankari Sharma says:

    ಬಂದ ಸಂಕಷ್ಟವು ಜಾಗೃತಿಯಿಂದಲೇ ಉಪಶಮನ…ಚೆನ್ನಾಗಿದೆ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: