ತೊಲಗಿಬಿಡು ಕಿರೀಟರೂಪಿ

Share Button

ಕಾಣದೆ ಕಾಡುತ್ತಿರುವೆ ನೀನು
ನೀ ಅಪ್ಪಿದಮೇಲೆ ಸೆಣಸುವರು ನಾವು
ತಪ್ಪು ನಿನ್ನದಲ್ಲ ನಮ್ಮದೇ
ರತ್ನಗಂಬಳಿ ಹಾಸಿ ಆಹ್ವಾನಿಸಿದವರು ನಾವು

ಮದ್ದಿರದೆ ಮೆರೆಯುತ್ತಿರುವೆ ಕಿರೀಟ ರೂಪಿ
ಸಿಕ್ಕ ಸಿಕ್ಕದ್ದು ತಿಂದು ನಿನ್ನ ಕರೆತಂದ
ಪಾಪಿ
ನರಳುತ್ತಿವೆ ಜೀವಗಳು ಯಾವ ಬೇಧವಿಲ್ಲದೆ
ಅಮಾಯಕರು ಬಲಿಯಾಗುತ್ತಿರುವರು
ಪ್ರಮಾದವಿಲ್ಲದೆ

ದಿನಗೂಲಿಗೆ ಹಸಿವಿನ ಸಂಕಟ
ಇದ್ದವರಿಗೆ ಬೀದಿ ಬೀದಿ ತಿರುಗುವ ಹಠ
ಎಷ್ಟು ಜನಕ್ಕೆ ಹಂಚಬಲ್ಲರು ಅನ್ನ
ಬಕಾಸುರನ ಒಡಲಿಗೆ ನೀರು ಮಜ್ಜಿಗೆಯನ್ನ

ಬೆಳೆದ ಬೆಳೆ ಕೊಳೆಯುತ್ತಿದೆ
ತಿನ್ನುವನ ಬಾಯಿಗೂ ಬೀಗ ಬಿದ್ದಿದೆ
ಬೆಳೆದವನ ರಟ್ಟೆ ಸೋಲುತ್ತಿವೆ
ಶ್ರಮದ ಯಜ್ಞ ಭಸ್ಮ ಪ್ರಸಾದ ನೀಡುತ್ತಿದೆ

ಅಂದು ಸ್ವಾತಂತ್ರಕ್ಕಾಗಿ ಬೀದಿಗಿಳಿದರು
ಇಂದು ಬದುಕಿಗಾಗಿ ಗೃಹಬಂಧಿಯಾಗಿಹರು
ಪರಕೀಯರು ಹತ್ತಿಕ್ಕುತ್ತಿದ್ದರು ಹೋರಾಟಗಾರರನ್ನ
ಇಂದು ಅವರೇ ರವಾನಿಸಿದ ಜೀವಿ
ಒತ್ತೆ ಇಟ್ಟಿದೆ ಮನುಕುಲವನ್ನು

ಫಲಿಸುತ್ತಿಲ್ಲ ಹೋಮ ಪ್ರಾರ್ಥನೆಗಳು
ಬತ್ತಿ ಉರಿದು ಆರಿತಷ್ಟೇ ನಿಂತಿಲ್ಲ ಆರ್ಥನಾದಗಳು
ಸಾಮಾಜಿಕ ಅಂತರ,ಸ್ವಚ್ಛತೆಯ ಪಾಠ
ಕಲಿಯುವವರೆಗು ನಿರಂತರ ಕೋರೋನಾ ಆರ್ಭಟ

ಜ್ಯೋತಿ ಬಸವರಾಜ

6 Responses

  1. ನಯನ ಬಜಕೂಡ್ಲು says:

    ವಾಸ್ತವದ ಚಿತ್ರಣ

  2. KRISHNAPRABHA M says:

    ಇಂದಿನ ವಸ್ತುಸ್ಥಿತಿಯನ್ನ ವಿವರಿಸುವ ಕವನದ ಸಾಲುಗಳು

  3. Savithri bhat says:

    ಕೊರೊನ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ..ಆದಷ್ಟು ಬೇಗ ಈ ರೋಗ ತೊಲಗಿ ಬಿಡಲಿ ಎಂದ ಪ್ರಾರ್ಥನೆ.

  4. Anonymous says:

    ಸಕಾಲಿಕ ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: