ಸರ್.ಎಂ.ವಿ. ಸ್ಮರಣಾರ್ಥ ಹನಿಗವನಗಳು

Share Button

ಬೇಡಿಕೆಯ ಸಾಕಾರ;
..ತಿನ್ನಲು ಕೊಟ್ಟ ಉಂಡೆ ಗಂಟಲಲ್ಲಿ ಸಿಕ್ಕಿಕೊಂಡಾಗ
..ಮುದುಕಿ ನೀಡಿದ ಗುಟುಕು ನೀರು ಉಳಿಸಿತ್ತು ಅವನ ಜೀವ.
..ಅವಳದ್ದೊಂದು ಬೇಡಿಕೆ, ದೊಡ್ಡವನಾಗಿ ನೀಗಿಸೆಂದು
..ನೀರಿನ ಸಮಸ್ಯೆ. ಆಕೆ ಕಂಡಿದ್ದಳೇ ಮುಂದೆ ಅವನೇ ಆಗಿ
..ದೊಡ್ಡ ಇಂಜಿನಿಯರ್ ಜಲಾಶಯವೊಂದನ್ನು ನಿರ್ಮಿಸುವನೆಂದು.

ಬಲಿ;
  ಸಂಸ್ಥಾನ ಕಂಡ ಶ್ರೇಷ್ಠ ನಿರ್ಮಾಣ ರೂವಾರಿ ನೀವು
  ಯಂತ್ರ, ತಂತ್ರ, ಕೈಗಾರಿಕೆ, ಆಡಳಿತ ಎಲ್ಲ
  ರಂಗದಲ್ಲೂ ದಕ್ಷತೆಯ ಮೆರೆದು ಕೊನೆಗೆ
  ದಕ್ಷತೆಯ ಮಾನದಂಡ ಪ್ರತಿಪಾದಿಸಿ ಬಲಿಯಾದಿರಿ.

ಕೀರ್ತಿಶೇಷರು:
  ಗೆರೆ ಮುರಿಯದ ಸೂಟು ಬೂಟು
  ತಲೆಗೆ ಮುಕುಟದಂತೆ ಕಂಬಿಪೇಟ
  ಸಮಯ ಪ್ರಜ್ಞೆಯೇ ಪುರುಷರೂಪಾಗಿದ್ದು
  ಶತಾಯುಷಿಗಳಾಗಿ ಶತಶತಮಾನಗಳವರೆಗೆ
  ಚಿರಸ್ಮರಣೀಯ ಕೀರ್ತಿಶೇಷರಾದಿರಿ.

ಮಾದರಿ:
  ಧರ್ಮ ಅರ್ಥ ಕಾಮಗಳ ಸಮನ್ವಯತೆಯೇ
  ಮೋಕ್ಷಕ್ಕೆ ದಾರಿಯೆಂದು ಹೇಳಿದ್ದಾರೆ ಹಿರಿಯರು
  ಹೆಸರಿನ ಆರಂಭದಲ್ಲೇ ಮೋಕ್ಷ ಬಿರುದನ್ನು
  ಹೊಂದಿರುವ ನೀವು ಆದಿರಿ ಎಲ್ಲರಿಗೆ ಮಾದರಿ.

ನನಸು:
  ನೋಡಲೆರಡು ಕಣ್ಣು ಸಾಲವು ಸೊಬಗಿನ ಬೃಂದಾವನ
  ಅದರ ಹಿಂದಿದೆ ಭವ್ಯವಾದ ಕೃಷ್ಣರಾಜಸಾಗರ
  ಭದ್ರವಾದ ಅಣೆಕಟ್ಟೆ, ಸುಂದರ ತೋಟದ ಕಲ್ಪನೆ
  ಅಪೂರ್ವ,ಸರ್.ಎಂ.ವಿ. ಮತ್ತು ಮಿರ್ಜಾರ ಕನಸು.
  ನನಸಾಗಿ ನೋಡಲು ಬರುತ್ತಿದೆ ಜನಸಾಗರ.

ಅಂದು-ಇಂದು:
  ಅಂದು ಸರ್.ಎಂ.ವಿ.ರವರು ಸೂಕ್ಷ್ಮಗ್ರಹಣ
  ಶಕ್ತಿಯಿಂದ ಉಳಿಸಿದರು ಸಾವಿರಾರು ಜನರ ಬದುಕನ್ನು
  ಇಂದು ವಿಕೃತ ಮನಸ್ಸಿನವರು ತಮ್ಮ ದುಷ್ಟ
  ಶಕ್ತಿಗಳಿಂದ ಕಳೆಯುತ್ತಿದ್ದಾರೆ ಸಾವಿರಾರು ಜನರ ಜೀವಗಳನ್ನು.

ಕಾಯಕ:
  ಬತ್ತಿ ತೈಲದ ಬಂಧ ಕಡಿದುಕೊಳ್ಳುವವರೆಗೂ
  ಹಣತೆ ಉರಿಸಿಕೊಳ್ಳುತ್ತಲೇ ಇರುವಂತೆ
  ಕಾಯಕವೇ ಕ್ಯಲಾಸವೆಂದು ಅರಿತು ನಡೆದರು
  ಜೀವಿತದ ಬಂಧ ಕಡಿದುಕೊಳ್ಳುವವರೆಗೂ
  ಮಹಾನುಭಾವ ಸರ್.ಎಂ.ವಿ ರವರು.

-ಬಿ.ಆರ್.ನಾಗರತ್ನ. ಮೈಸೂರು.

5 Responses

  1. ನಯನ ಬಜಕೂಡ್ಲು says:

    ಸುಂದರವಾಗಿದೆ. ಒಬ್ಬ ಮೇರು ವ್ಯಕ್ತಿತ್ವದ ವ್ಯಕ್ತಿಯ ಬಗೆಗಿನ ಚಿತ್ರಣ ಕವಿತೆಯ ರೂಪದಲ್ಲಿ. ನೈಸ್

  2. Hema says:

    ಹನಿಗವನಗಳು ಸೊಗಸಾಗಿವೆ.

  3. ಶಂಕರಿ ಶರ್ಮ says:

    ಸೊಗಸಾದ ಸಕಾಲಿಕ ಹನಿಗವನಗಳು.

  4. ಪದ್ಮ ಆನಂದ್ says:

    ಮೇರು ವ್ಯಕ್ತಿತ್ವದ ಸರ್.ಎಂ..ವಿ, ಅವರ ಅಗಾಧ ಪ್ರತಿಭೆಯ ಸಂಕ್ಷಿಪ್ತ ಚಿತ್ರಣ. ಸೊಗಸಾಗಿದೆ. ಅಭಿನಂದನೆಗಳು.

  5. ಬಿ.ಆರ್.ನಾಗರತ್ನ says:

    ನನ್ನ ಬರಹಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ ದ ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: