ಆತ್ಮದೀಪ

Share Button

ಪ್ರೀತಿಸುವದಿಲ್ಲ ಯಾವುದನ್ನೂ
ಪ್ರಜ್ವಲಿಸುವೆ ಈ ನೆಲದ ಆತ್ಮದೀಪವಾಗಿ
ಬಯಸುವುದು ಜಗತ್ತು ಎಲ್ಲಿಯವರೆಗೆ
ನೀಡುವೆನು ಬೆಳಕನು ಅಲ್ಲಿಯವರೆಗೆ

ತೆರೆದರೆ ಜ್ವಾಲೆಯ ಬಾಗಿಲು
ಕುರುಡಾಗುವವು ವಿಶ್ವದ ಕಣ್ಣುಗಳು
ಛಿದ್ರತೆಯ‌ಲಿ ಬೆರಗುಗೊಂಡ ನೋಟ
ನಂದಿಸಿ ಜ್ವಾಲೆಯ‌ನು, ನಿರಾಕರಣೆಯಿಲ್ಲ

ಪರಿಗಣಿಸಿರಿ ಆ ಜೀವನವನು ಮಾತ್ರ
ಅರಿಯಿರಿ ಅಂತರವ ಮಣ್ಣಿನ ದೀಪಗಳಲಿ
ಸಾಲ ನೀಡಿದೆ ಪ್ರಕೃತಿ ಬದುಕಲು ಇಲ್ಲಿ
ಮಾನಾಭಿಮಾನದ ಜೀವಂತ ದೀಪವಾಗಿ

ಯೋಚಿಸಿರಿ ಒಂದು ಕ್ಷಣ…
ಸಹಾಯ ಹಸ್ತ ಚಾಚುವ ಮುನ್ನ
ವ್ಯಕ್ತಪಡಿಸದಿರಿ ವಿಷಾದವನು ಹಿಂದಿನಿಂದ
ನಂದಿಸಿರಿ, ಎರಡನೇ ಬಾರಿ ಸುಡದಿರುವ ಹಾಗೆ

-ರಾಘವೇಂದ್ರ ದೇಶಪಾಂಡೆ, ಹೊಸಪೇಟೆ

3 Responses

  1. ನಯನ ಬಜಕೂಡ್ಲು says:

    Nice one

  2. Hema says:

    ಅರ್ಥವತ್ತಾದ ಕವನ ಇಷ್ಟವಾಯಿತು

  3. ಶಂಕರಿ ಶರ್ಮ says:

    ನಿಸ್ವಾರ್ಥ ಕರ್ಮದಲಿ ಆತ್ಮಜ್ಯೋತಿ ಬೆಳಗಿಸಿದ ಚಂದದ ಕವಿತೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: