ಬಿತ್ತಿದಂತೆ ಬೆಳೆ

Share Button

ಮಾಯಾಲೋಕದೊಳು ಬಾಳುವುದು ಹೇಗೆಂದು
ನಾನಾ ಚಿಂತೆಯನು ಮಾಡುವುದು ನೀತೊರೆದು
ಪರಿಪಕ್ವದಲ್ಲಿಂದು ಮನಸನ್ನು ಹೊಂದು
ತಿಳಿಗೊಡದ ನೀರಂತೆ ಸಿಗುವುದದಕೆ ಉತ್ತರ

ಪರಿಶುದ್ಧತೆಯ ಮನಸ್ಸನ್ನು ನೀ ಹೊಂದಿದಾಗ
ಸ್ನೇಹ ಸೌಹಾರ್ದತೆಗೆ ಮನಕರಗಿದಾಗ
ಬಿತ್ತಿದಂತೆ ಫಲವನ್ನು ಬೆಳೆಯುತ್ತಿರುವಾಗ
ಮೇರು ಶಿಖರತಂತೆ ಬೆಳೆಯುವೆ ನೀ ಎತ್ತರ

ಭವರೋಗ ಕಳೆದು ಮಾನವೀಯತೆ ಹೊಂದಿ
ಮಾತುಗಾರಿಕೆಯ ತೂಕ ಹೆಚ್ಚುಗಾರಿಕೆ ಹೊಂದಿ
ಏಕತೆಯ ಮನೋಭಾವ ದ್ವಿಗುಣತೆ ಹೊಂದಿ
ಮನುಜನ ಗುಣವಾಗ ಬಹು ಎತ್ತರ

ನಮ್ಮಲ್ಲಿ ಲೋಪದೋಷಗಳ ತ್ಯಜಿಸಿ
ನೋವನ್ನು ಇರಿದು ನೋವಿಸುವದನು ನಿಲಿಸಿ
ಕಷ್ಟದಲಿ ಪರಿಹಾರ ನೀವಲ್ಲಿ ಕೊಡಿಸಿ
ಉಪಕಾರ ಮಾಡಿದ ತೃಪ್ತಿಯೆ ಮಹದೆತ್ತರ

-ಮಧುಮತಿ ರಮೇಶ್ ಪಾಟೀಲ್ 

5 Responses

  1. Dharmanna dhanni says:

    ಕವನ ಅರ್ಥಪೂರ್ಣವಾಗಿದೆ. ಧನ್ಯವಾದಗಳು

  2. ನಯನ ಬಜಕೂಡ್ಲು says:

    ಬದುಕಿನ ಸರಳ, ಸುಂದರ ಸೂತ್ರ, ಪ್ರತಿಯೊಂದು ನಡೆಯನ್ನು ಅರಿತು ಹಿತಮಿತವಾಗಿ ಎಲ್ಲರೊಡನೆ ಬೆರೆತು ಬಾಳುವ ಮಂತ್ರ. ಚೆನ್ನಾಗಿದೆ ಕವನ.

  3. Meghana Kanetkar says:

    ಚಂದದ ಕವನ

  4. ASHA nooji says:

    ಚಂದದ ಕವನ

  5. Savithri bhat says:

    ಬಿತ್ತಿದಂತೆ ಬೆಳೆ ಸುಂದರವಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: