ಮೌನದೊಳಗೆ ಜಗದ ಬೆಳಕಾದೆ!

Share Button
 

 

ಜಗವೆಲ್ಲಾ ಮಲಗಿರಲು ಬುದ್ದನೊಬ್ಬ ಎದ್ದ
ಜಗದ ಜಂಜಡವ ಅರಿತು ಪರಿಹಾರ ಸೂಸಿದ
ಬೋಧಿವೃಕ್ಷದಡಿ ಕುಳಿತು ಮಹಾ ತಪಸ್ಸು ಮಾಡಿ
ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶವ ನೀಡಿ.

ಸದಾ ನಗುಮುಖವ ಸೂಸುತ
ಎಲ್ಲೆಡೆ ಸಂಚರಿಸಿ ಮಾರ್ಗದರ್ಶನ ನೀಡುತ
ಸಾಗಿದೆ ಸಾಗಿದೆ ನೀ ಎಲ್ಲಾ ಎಲ್ಲೆಗಳ ದಾಟಿ
ಭವ ಬಂಧನಗಳ ಕಳಚಿ ಸಂಚಲನವ ಮೀಟಿ.

ಬುದ್ಧಂ ಶರಣಂ ಗಚ್ಛಾಮಿ ಎಂಬ ಧ್ಯೇಯ ವಾಕ್ಯವ ನೀಡಿ
ಎಲ್ಲರಲ್ಲೂ ಸತ್ಯ, ಸಂಸ್ಕಾರಗಳ ಪೋಷಣೆ ಮಾಡಿ
ಬೌದ್ಧಧರ್ಮ ಪರಿಚಾರಕರಾಗಿ ಆದೆ ನೀನು ತ್ಯಾಗಿ
ಜಗತ್ತಿನೆಡೆಗೆ ಸಂದೇಶವ ಸರಮಾಲೆ ಸಾರಿದ ಯೋಗಿ.

ರಾಜವೈಭವ ಕ್ಷಣಿಕ ಎಂದನರಿತು ನಡೆದೆ
ಎದುರಿಗೆ ಸಿಕ್ಕವರ ಮನಗೆದ್ದು ನುಡಿಮುತ್ತ ನುಡಿದೆ
ಮೌನವಾಗಿದ್ದುಕೊಂಡೆ ಜಗದ ಬೆಳಕಾದೆ
ಸಿದ್ಧಾರ್ಥನಾಗಿದ್ದ  ನೀನೇ ಅಂತಿಮವಾಗಿ ಬುದ್ಧನಾದೆ.

ಎಂದೆಂದಿಗೂ ಬೆಳಗುವ ನಂದಾದೀಪದ ರೂವಾರಿ
ನೀ ನಡೆದ ಹಾದಿಯೆಲ್ಲ ಆಯಿತು ಹೆದ್ದಾರಿ
ಜ್ಞಾನವ ಪಡೆದು ಅಜ್ಞಾನವ ನೀಗಿಸಿದ  ಸಂಚಾರಿ
ನೀ ಎಂದೆಂದಿಗೂ ಸರ್ವರಿಗೆಲ್ಲ ಮಾದರಿ.

-ಕಾಳೀಹುಂಡಿ ಶಿವಕುಮಾರ್ , ಮೈಸೂರು. 

5 Responses

  1. ಅರ್ಥಗರ್ಭಿತವಾದ ಕವನ
    ವಂದನೆಗಳು

  2. ಬಿ.ಆರ್.ನಾಗರತ್ನ says:

    ಸಾಂದರ್ಭಿಕ ಕವನ ಚೆನ್ನಾಗಿದೆ ಮೂಡಿ ಬಂದಿದೆ ಸಾರ್ ಅಭಿನಂದನೆಗಳು.

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ಶಂಕರಿ ಶರ್ಮ says:

    ಅಹಿಂಸೆ,ತ್ಯಾಗ,ಶಾಂತಿ ಸಂದೇಶಗಳನ್ನು ಜಗತ್ತಿಗೆ ಸಾರಿದ ಮಹಾಪುರುಷ.. ಗೌತಮ ಬುದ್ಧ.. ಸಕಾಲಿಕ ಸುಂದರ ಕವನ.

  5. Padma Anand says:

    ಬುದ್ದನಂತಹ ಮಹಾಮಹಿಮರ ಬಗ್ಗೆ ಬರೆದಷ್ಟೂ ಇನ್ನೂ ಇರುತ್ತದೆ. ಓದಿದಷ್ಟೂ ಇನ್ನೂ ಓದುವ ಇಷ್ಟವಾಗುತ್ತದೆ. ಕವನ ಅರ್ಥವತ್ತಾಗಿದೆ. ಅಭಿನಂದನೆಗಳು.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: