ಆಮಂತ್ರಣ-ದರ್ಪಣ

Share Button
.

ಆಮಂತ್ರಣ ಆಗಿರಲಿ ಅರ್ಥಪೂರ್ಣ
ಇಲ್ಲವಾದರೆ ಮನದಲ್ಲಾದೀತು ಹಗರಣ
ಆಮೇಲೆ ಮಾಡಿದರೇನು ಶುದ್ಧೀಕರಣ

ತೋರುತ್ತದೆ ತಿದ್ದಿದಂತೆ ವ್ಯಾಕರಣ
ಕ್ಷಣ ತಾಣ ಆಗುತ್ತದೆ ಪ್ರಮಾಣ
ಮನಸ್ಸು ವಿಲಕ್ಷಣದ ಅಸಾಧಾರಣ ಮಿಶ್ರಣ

ಸಂಬಂಧ ಪುನರ್ ನಿರ್ಮಾಣ ಆಗ ಕಠಿಣ
ಸಂಪೂರ್ಣಗೊಳಿಸಿ ವಿಶ್ಲೇಷಣದ ಭ್ರಮಣ
ನೋಡಿಕೋ ಮನುಜ ನೀನಾಗಿ ನಿನದೇ ದರ್ಪಣ

ಲತಾಪ್ರಸಾದ್

8 Responses

  1. Vanaja k says:

    Great latha super dear

  2. Ramabhat says:

    ಬಹಳ ಚೆನ್ನಾಗಿ ವಿವರಿಸಿದ್ದೀರಿ ಈಗಿನ ಪರಿಸ್ಥಿತಿಯ ತಕ್ಕಂತೆ ನಾವು ಮಾಡಿಕೊಂಡು ಹೋದರೆ ಆಮೇಲೆ ನಾವು ಎಲ್ಲವನ್ನು ಸರಿಪಡಿಸಿಕೊಳ್ಳಬಹುದು

  3. G G LAXMAN PRABHU says:

    ಮಾತು ಕೆಲಸಗಳು ಆಗುವುದು ಅರ್ಥಪೂರ್ಣ
    ಸಾಧ್ಯ ತೊಡಗಿಸಿಕೊಂಡಾಗ ತನ್ನನ್ನು ಸಂಪೂರ್ಣ
    ನುಡಿ ನಡೆಗಳು ಆದಾಗ ಕ್ಷಣಕ್ಷಣವೂ ಭಾವಪೂರ್ಣ
    ಜೀವನದುದ್ದ ಕಾಣ ಸಿಗುವುದು ವಿಧ ವಿಧದ ವರ್ಣ

  4. Latha prasad says:

    ಧನ್ಯವಾದಗಳು

  5. Malatesh M Hubli says:

    Nice

  6. ನಯನ ಬಜಕೂಡ್ಲು says:

    ಚೆನ್ನಾಗಿದೆ ಕವಿತೆ

  7. Latha prasad says:

    ಕವಿತೆ ಮೆಚ್ಚಿದ ಸರ್ವರಿಗೂ ಧನ್ಯವಾದಗಳು

  8. ಶಂಕರಿ ಶರ್ಮ says:

    ಕವಿತೆ ಬಹಳ ಅರ್ಥಪೂರ್ಣ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: