“ಶುದ್ಧ”

Share Button


ಓ ಪ್ರವಾಹವೇ
ಆಸ್ತಿ ಪಾಸ್ತಿ
ಮನೆ ಮಾರು
ಮಕ್ಕಳು ಮುದುಕರೆನ್ನದೆ
ಕೊಚ್ಚಿಕೊಂಡು ಹೋದೆ,,
ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆ
ಉಳಿದವರಲ್ಲಿ ಉಳಿಸಿ ಹೋದೆ
ನಾನು ನನ್ನದೆಂಬ  ಮೋಹಗಳನ್ನು,,,

ಕೊಚ್ಚಿ ಹೋಗಲಿಲ್ಲವೇಕೆ
ಅಹಂ,ಅಸೂಯೆ, ದುರಾಸೆಗಳು,,,,
ಓ‌ ಪ್ರವಾಹವೇ
ನೀನು ಸೋತು ಹೋದೆಯಾ
ಮನಸುಗಳ ಶುದ್ಧ ಮಾಡುವುದರಲ್ಲಿ
ಅಥವಾ
ಪ್ರವಾಹದ ನೀರು ಸಾಲಾದಾಯಿತೆ
ಮನಸ್ಸುಗಳ ತೊಳೆದು
ಶುದ್ಧ ಮಾಡುವುದಕ್ಕೆ !

ವಿದ್ಯಾ ವೆಂಕಟೇಶ.  ಮೈಸೂರು

7 Responses

  1. ಪ್ರವಾಹದಿಂದ ಮನಸ್ಸು ಕೊಚ್ಚಿ ತೊಲಗದೆ ಬಿಟ್ಟು ಸಾಗಿದೆ. ಕವನ ಚೆನ್ನಾಗಿದೆ. ಧನ್ಯವಾದಗಳು

  2. B C Narayana Murthy says:

    Super

  3. ನಾಗರತ್ನ ಬಿ. ಅರ್. says:

    ಅರ್ಥಪೂರ್ಣ ವಾದ ಕವನ ಸೋದರಿ ಚೆನ್ನಾಗಿದೆ.

  4. Vathsala says:

    ಯಾವ ಪ್ರವಾಹಕ್ಕೂ ಮನುಷ್ಯನ ಮಲಿನತೆ ತೊಳೆಯುವ
    ಸಾಮರ್ಥ್ಯ ವಿಲ್ಲವೆಂಬ ಮಾರ್ಮಿಕ ಕವನ ನೈಜವಾಗಿದೆ..

  5. ನಯನ ಬಜಕೂಡ್ಲು says:

    ಹೌದು, ಅಹಂ, ಅಸೂಯೆಗಳ ಕೊಳೆ ತೊಳೆದು, ಶುದ್ಧ ವಾಗಬೇಕಿದೆ ಅಂತಃಕರಣ.

  6. Padma Anand says:

    ಪ್ರವಾಹದಿಂದ ಅನಾಹುತವಲ್ಲದೆ ಬೇರೇನು ಸಾಧ್ಯ? ವಿವೇಕವೆಂಬ ತಿಳಿನೀರ ಝರಿಂದಷ್ಟೇ ಮನದ ಮಲಿನವ ತೊಳೆಯಬಹುದು. ಸುಂದರ ಕವನ

  7. ಶಂಕರಿ ಶರ್ಮ says:

    ಮನದ ಮಲಿನವನ್ನು ತೊಳೆದು ಶುದ್ಧಗೊಳಿಸುವ ಪ್ರವಾಹಕ್ಕಾಗಿ ಹಾತೊರೆದಿದ್ದಾರೆ ಕವಯಿತ್ರಿ ವಿದ್ಯಾ ಮೇಡಂ ಅವರು.. ಸುಂದರ ಪರಿಕಲ್ಪನೆ ನೆನಸಾಗಲಿ..

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: