ಧ್ಯಾನ

Share Button

ಹೆತ್ತ  ಕೂಸ ಲಾಲಿಸಿ ಪಾಲಿಸಿ
ಸುಸಂಸ್ಕತಿಯ ಮೈಗೂಡಿಸುವಲ್ಲಿ
ಹೆತ್ತವ್ವನ ಅವಿರತ ಮಮತೆಯೇ  ಧ್ಯಾನ

ಕಾಡ್ಗಲ್ಲನಂಥ ಮಗುವ ತಿದ್ದಿ ತೀಡಿ
ಸುಸಂಸ್ಕೃತ ಮನುಜನಾಗಿಸುವಲ್ಲಿ
ಗುರುವಿನ ಶ್ರದ್ಧಾ ಬದ್ಧತೆಯೇ ಧ್ಯಾನ

ಹದ ಮಾಡಿ ಮಣ್ಣ ಬಿತ್ತಿ ಬೀಜವ
ಉಣಿಸಿ ನೀರ ಸಮೃದ್ಧ ಬೆಳೆ ಬೆಳೆವಲ್ಲಿ
ಅನ್ನದಾತನ ಬೆವರಿಳಿವ ಶ್ರಮವೇ  ಧ್ಯಾನ

ಗೆಳೆತನದ ವೃಕ್ಷಧಡಿಯ ನೆಳಲಲ್ಲಿ
ಪ್ರಿಯಂವದೆಯಾಗದೆ ನಿಷ್ಠುರತೆಯಲ್ಲಿ
ಒಳಿತೆಸಗುವ ಮನದ ಸ್ನೇಹವೇ ಧ್ಯಾನ

ಜೀವನ ಪ್ರೀತಿಯ ಸಾಪೇಕ್ಷ ಸಾನುರಾಗ
ಬತ್ತದಂತೆ  ನೀರೆರೆಯುತ ಕಾಪಿಡುವಲ್ಲಿ
ಒಲಿದ ಮನಗಳ ಒಲುಮೆಯೇ ಧ್ಯಾನ ಏನೇ

ಊರ್ಧ್ವ ಮುಖಿ ಕವಲೊಡೆದ ಕೊಂಬೆಗಳಿಗೆ
ಸಾರಸರ್ವಸ್ವವನೆಲ್ಲ ಹೀರಿ ಉಣಿಸುವಲ್ಲಿ
ಅಜ್ಞಾತ ಬೇರಿನ ಪ್ರದಾನವೇ ಧ್ಯಾನ

ಎಂ.ಆರ್. ಅನಸೂಯ

16 Responses

  1. ವಿದ್ಯಾ says:

    ನಮಸ್ಕಾರ ಅತ್ಯುತ್ತಮ, ಭಾವ ಸತ್ಯಗಳ ಅನುಸಂಧಾನದ ಕವನ ನನಗೆ ತುಂಬಾ ಅಪ್ತವೆನಿಸಿತು

  2. ನಯನ ಬಜಕೂಡ್ಲು says:

    ಅರ್ಥಪೂರ್ಣ ಕವನ

  3. ನಾಗರತ್ನ ಬಿ. ಅರ್. says:

    ಧ್ಯಾನ ದ ವಿವಿಧ ಕೋನಗಳನ್ನು … ಅಂದರೆ ಮಾಡುವ ಕೆಲಸಗಳಲ್ಲಿ ಪ್ರತ್ಯಕ್ಷ ಪರೋಕ್ಷಗಳ ಪ್ರತಿಕ್ರಿಯೆಗಳನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ ಮೇಡಂ.

  4. B c n murthy says:

    ಚೆನ್ನಾಗಿದೆ

  5. sudha says:

    True. any good work done with concentration is dhyana

  6. Padma Anand says:

    ಧ್ಯಾನಾವಸ್ಥೆಯ ವಿವಿಧ ಮಜಲುಗಳ ಅನಾವರಣ ಸುಖ ಸಂಸಾರದ ಸೂತ್ರಗಳಾಗಿ ಹೊರಹೊಮ್ಮಿದೆ.

  7. ಶಂಕರಿ ಶರ್ಮ says:

    ಧ್ಯಾನದ ವಿವಿಧ ಆಯಾಮಗಳನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದ ಪರಿ ಅನನ್ಯ! ಸುಂದರ ಕವನಕ್ಕೆ ಧನ್ಯವಾದಗಳು ಅನಸೂಯ ಮೇಡಂ.

  8. Padmini says:

    ನಿಜ, ಊರ್ಧ್ವಮುಖಿ ಆಗಿಸುವ ಸಾಧನವೇ ಧ್ಯಾನ!

  9. Hema says:

    ಬಹಳ ಅರ್ಥವತ್ತಾದ ಕವನ.

Leave a Reply to Anasuya M R Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: