ಜೀವನ ಪಯಣ

Share Button

ಜನನದೂರಿಂದ ಮರಣದೂರಿಗೆ
ಜೀವನ ಪಯಣ ಗಾಡಿ ಹೊರಟಿದೆ
ನೆನಪುಗಳ ಮೂಟೆ ಹೊತ್ತುಕೊಂಡು
ನಲಿವು ನೋವಿನ ಹಳ್ಳ ದಿನ್ನೆ ದಾಟಿದೆ.

ಭಗವಂತನೇ ಚಾಲಕ ನಿರ್ವಾಹಕನಾಗಿ
ಸಾಗುವೂರಿಗೆ ಚೀಟಿಯ ನೀಡಿರುವನು
ಬಂಧು ಬಳಗದ ನಿಲ್ದಾಣಗಳಲ್ಲಿ ನಿಂತು
ಸಂಬಂಧಿಕರ ಹತ್ತಿಸಿಕೊಂಡು ಇಳಿಸಿದನು.

ಬಾಳ ತಿರುವಿನ ಘಟ್ಟಗಳಲ್ಲಿ ತಿರುಗಾಡಿಸಿ
ರಸಮಯ ಕ್ಷಣಗಳ ಮೆಲುಕು ಹಾಕಿಸಿದನು
ಬಾಳ ಖಾನಾವಳಿಯಲ್ಲಿ ಊಟ ಮಾಡಿಸಿ
ಬಾಳೆಲೆಯಂಗೆ ಬಾಳಿದೆಂದು ತಿಳಿಸಿದನು.

ಜನನಿ ಗರ್ಭದ ಪ್ರಥಮ ನಿಲ್ದಾಣದಿಂದ
ಅವನಿ ಗರ್ಭದ ಅಂತಿಮ ನಿಲ್ದಾಣ್ವೆಂದನು
ನಾವರಿತುಕೊಂಡು ಹೋಗೋಣವೆಂದ
ಶಿವ ಸಾನ್ನಿಧ್ಯವ ಪಡೆಯೋಣವೆಂದನು.

ಶಿವಮೂರ್ತಿ.ಹೆಚ್.

9 Responses

  1. ವಿದ್ಯಾ says:

    ಅನುಭವ ಅನುಭಾವದ ಕವನ ಚೆನ್ನಾಗಿದೆ

  2. ನಾಗರತ್ನ ಬಿ. ಅರ್. says:

    ವಾವ್…ಇಡೀ ಬದುಕಿನ ಅನಾವರಣವನ್ನು ಕವನದ ಮೂಲಕ ವ್ಯಕ್ತಪಡಿಸಿರುವ ರೀತಿ ಬಹಳ ಚೆನ್ನಾಗಿ ಮೂಡಿಬಂದಿದೆ ಸಾರ್ ಧನ್ಯವಾದಗಳು.

  3. ಲಕುಮಿಕಂದ says:

    ತುಂಬಾ ಅರ್ಥವತ್ತಾಗಿ ಬದುಕಿನ ಮಜಲು ಮತ್ತು ಮಹಲುಗಳ ಬಗ್ಗೆ ಹೇಳಿದ್ದಿರಿ ಸರ್..

  4. ನಯನ ಬಜಕೂಡ್ಲು says:

    ಇಡೀ ಬದುಕಿನ ಅರ್ಥ, ಸಾರ ಅಡಗಿದೆ ಕವನದಲ್ಲಿ

  5. . ಶಂಕರಿ ಶರ್ಮ says:

    ಜೀವನದ ಪಯಣ, ಅದರ ಮಜಲುಗಳು ಭಾವನಾತ್ಮಕವಾಗಿ ಮೂಡಿಬಂದ ಸೊಗಸಾದ ಕವನ.

  6. Padma Anand says:

    ಜೀವನಪಯಣದ ಸಾರವನ್ನು ಕವಿತೆ ಸುಂದರವಾಗಿ ಅನಾವರಣಗೊಳಿಸಿದೆ. ಅಭಿನಂದನೆಗಳು

  7. Padmini says:

    ಬದುಕಿನ ಮಜಲುಗಳನ್ನು ವ್ಯಕ್ತಪಡಿಸಿರುವ ರೀತಿ ಚೆನ್ನಾಗಿದೆ

  8. ಡಾ. ಕೃಷ್ಣಪ್ರಭ ಎಂ says:

    ಚಂದದ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: