ನಾನೆಂಬದೇನೋ?..

Share Button

ಆಸೆಯೆಂಬ ನೊಗವೊತ್ತು
ಜಂಭದ ಬೀಜ ಬಿತ್ತಿದರೇನು
ನೀಚತನದ ಕಳೆ ಬೆಳೆದು
ಕಾಲಗರ್ಭದಿ ಎಡವಿ ಬಿದ್ದಿತು
ನೋಡಾ ಮಾಯೆಯ ಜಗದೊಳಗ.

ಹುಚ್ಚು ಕುದುರೆಯನೇರಿ
ಅಸ್ತoಗತ ಸವಾರಿ ಮಾಡಿ
ಸಾಗುವ ಸಿಮಾವಿಲ್ಲದ ದಾರಿ
ಗುರಿಹುಡುಕಿ ಗುರುವ ಮರೆತರೆ
ಸಾಧ್ಯವಾದೀತೇನಾ ಜಗದೊಳಗ

ಹುಡುಹುಡುಕಿ ಮತ್ತದೇ ತಾಕಿತು
ಇರುವ ಭಾಗ್ಯವ ಮರೆತು
ಮತ್ತೆ ಮತ್ತೆ ಚಿಂತೆಗೆ ನೊಕೀತು
ಕಾಣಬಲ್ಲೆನೇ ಆ ಒಂದು ದಿನ
ನೆರಳು ನೀಡಿದ ಬದುಕನಾ…

ತಪಗೈದು ಪಡೆದ ಭಾಗ್ಯವಿದು
ಹಿರಿತಲೆಗಳ ಶಾಂತಿ ಮಂತ್ರವಿದು
ಕರ್ಮಭೂಮಿಯ ಫಲವಿದು
ಶ್ರಮದ ಬದುಕು ಸಾರ್ಥಕ ಮಾಡಿಕೋ
ಇಹ ಪರದ ಜೀವನವನಾ…..

-ವೀರೇಶ್ ಬಿ ಎಮ್ ಜಿ, ದಾವಣಗೆರೆ

7 Responses

  1. ಶಿವಮೂರ್ತಿ.ಹೆಚ್. says:

    ತುಂಬಾ ಅರ್ಥಪೂರ್ಣವಾದ ಕವಿತೆ… ಕವಿ ರಾಕ್ಷಸ ವೀರೇಶ್ ಅವರು ಪದಗಳ ಹೆಕ್ಕುವಿಕೆಯೇ ಅದ್ಭುತ

  2. Anonymous says:

    ಧನ್ಯವಾದಗಳು… ಸರ್

  3. ನಯನ ಬಜಕೂಡ್ಲು says:

    ಚಂದದ ಸಾಲುಗಳು

  4. ಬದುಕಿನ ಹೂರಣದ ಅನಾವರಣ.. ಸರಳ ಸುಂದರ ಸಾಲುಗಳಲ್ಲಿ ಪಡಿಮೂಡಿಸಿರುವುದು…ಮುದತಂದಿತು…ಸಾರ್ ಧನ್ಯವಾದಗಳು ಸಾರ್

    • Anonymous says:

      ಧನ್ಯವಾದಗಳು ಮೇಡಮ್ ನಿಮ್ಮ ಸವಿ ನುಡಿಗಳಿಗೆ..

  5. Padma Anand says:

    ಆಧ್ಯಾತ್ಮಿಕ ತತ್ವವನ್ನು ಸುಲಭವಾಗಿ ಅರ್ಥೈಸಿರುವ ಸಹಜ ಸುಂದರ ಪದಪುಂಜಗಳು.

  6. . ಶಂಕರಿ ಶರ್ಮ says:

    ಇಹ ಪರದ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಆಧ್ಯಾತ್ಮಿಕ ಪಥವನ್ನು ತೋರಿಸುವ ಸುಂದರ ಕವನ

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: