ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ..

Share Button

ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ/
ನಾನೇನ್ ಮಾಡ್ಬೇಕ್ ಒಸಿ ಹೇಳು ಕನ್ನಡದಕ್ಷರಗಳ್ನ ಕಲಿಯೋಕೆ/
ವಿದ್ಯೆ ಬುದ್ದಿ ಎಲ್ಲ ಕೊಡೋಳು ನೀನೇನಾ ಸರ್ಸೋತ್ತಮ್ಮ/
ಇಸ್ಕೊಲ್ಗೆ ಹೋಗ್ಬೇಕಾ ಇಲ್ಲ ನಿನ್ತಾವ್ ಬಂದ್ರೆ ಸಾಕ ಹೇಳ್ಸ್ಕೊಳ್ಳೊಕೆ/
 
ಹೇಳ್ತೀನಿ ವಸಿ ಕೇಳು ಕನ್ನಡ್ದೋರ್ ಮಾಡ್ತಾ ಇರೋ ಅನ್ಯಾಯಗಳ್ನ/
ಈಗ್ ನಮ್ಮೊರೆಲ್ಲ ಕನ್ನಡಾನ್ ಬಿಟ್ಟು ಮಾತಾಡ್ತಾರೆ ಬೇರೆ ಬಾಷೆಗಳ್ನ/
ಗೌರವ ಕೊಡ್ದೆ ಮಕ್ಕಳ್ಗೆ ಕನ್ನಡ ಕಲ್ಸ್ದೆಅಸಡ್ಡೆ ಮಾಡ್ತಿದ್ದಾರೆ ಕನ್ನಡ್ತಾಯ್ನ/
ಸ್ವಲ್ಪ ಕನ್ನಡದಕ್ಷರಗಳ್ನ ಕಲ್ಸುಎಲ್ಲಾರ್ಗು ತೋರ್ಸ್ಥಿನಿ ಕನ್ನಡದ್ ಮಹಿಮೆನ/
 
ಏಳೇಳು ಜನ್ಮಗಳ ಪುಣ್ಯ ನಾವ್ ಕನ್ನಡ್ ತಾಯಿ ಮಡಿಲ್ನಲ್ಲಿ ಹುಟ್ಟೋದಿಕ್ಕೆ/
ತಾಯಿ ಭಾಷೆಲ್ ಮಾತಾಡ್ದೆ ಕನ್ನಡ್ದೊರೊ ದ್ರೋಹ ಮಾಡ್ತಿದಾರ್ ಯಾಕೆ/
ಮರಿ ಬೇಕ್ ಯಾಕೆ ಕಸ್ತೂರಿ ಕನ್ನಡಾನ ಬೇರೆ ಭಾಷೆಗಳಲ್ ಮಾತಾಡೋಕ್ಕ್ಕೆ /
ಕನ್ನಡ್ದಲ್ಲಿರೋ ಇರೋ ಸಿರಿಸಂಪತ್ತ್ತುಬೇರೆ ಭಾಷೆಲ್ಲಿ ಇದ್ಯಾ ಹೇಳ್ಕೊಳ್ಳೊಕೆ/
 
ಕನ್ನಡದ್ ಕಸ್ತೂರಿ ಕಂಪ್ನಲ್ಲಿ ಕನ್ನಡಾನ್ ಲೋಕಕ್ಕೆ ಬೋಧಿಸ್ತೀನಿ /
ಶ್ರೀಗಂಧ ಸೌರಭದಲ್ಲಿ ಸಿರಿ ಕನ್ನಡದ್ ಹಿರಿಮೆನ ಹಾಡ್ತೀನಿ/
ಕನ್ನಡದ್ ಹೂಗಳ ಪರಿಮಳದಲ್ಲಿ ಕನ್ನಡಾನ್ ಪ್ರಪಂಚಕ್ ಕಲ್ಸ್ತಿನಿ/
ಜಾಜಿಮಲ್ಲಿಗೆ ಸೊಂಪ್ನಲ್ಲಿ ಸವಿ ಕನ್ನಡದ್  ಮಹಾತ್ಮೆನ  ಗುಣ್ಗುಣ್ಸ್ತಿನಿ/
 
ಕೊಡು ನನ್ಗೆ ವಿದ್ಯೆ ಬುದ್ದಿನ ಸರ್ಸೋತ್ತಮ್ಮನಿನ್ ಕಾಲಗ್ಬಿದ್ದು ಪೂಜೆ ಮಾಡ್ತೀನಿ/  
ಕನ್ನಡ್ದಕ್ಷರಗಳ ಸೌಂದರ್ಯಾನ ಪಚ್ಚೆಕಲ್ಗಳ್ಮೇಲೆ ಸುವರ್ಣಾಕ್ಷರಗಳಲ್ ಕೆತ್ತಿಸ್ತೀನಿ/
ಕನ್ನಡ್ಭಾಷೆನ ಮೂರು ಲೋಕ್ದಾಗೆ ಮಾತಾಡೋ ಹಂಗ್ ಮಾಡೋಕ್ ಕಂಕಣ ತೊಟ್ತಿನಿ/
ಸೂರ್ಯ ಚಂದ್ರರ ಬೆಳಕಿಲ್ದೇನೆ ಹೊಳೆಯೋನ್ಗೆ ಕನ್ನಡ್ಭಾಷೆಗೆ ಮೆರುಗ್ ಕೊಡ್ತೀನಿ/

ಮಿತ್ತೂರು ಎನ್. ರಾಮಪ್ರಸಾದ್

4 Responses

  1. ನಾಗರತ್ನ ಬಿ. ಆರ್ says:

    ಕನ್ನಡ ದ..ಹಿರಿಮೆ..ಗರಿಮೆಯನ್ನು…ತಿಳಿಸಿರುವ…ಕವನ.

    ಬಾಳಾ..ಪಸಂದಾಗಿ…ಮೂಡಿಬಂದಿದೆ.. ಸಾರ್.. ಅಭಿನಂದನೆಗಳು..

  2. Padmini Hegde says:

    Very fine!

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ಶಂಕರಿ ಶರ್ಮ says:

    ಕನ್ನಡಾಭಿಮಾನ ಉಕ್ಕಿ ಹರಿಯುತ್ತಿದೆ….ಕವನದಲ್ಲಿ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: