ಬರಹ

Share Button

ಬರೆಬರೆದು ಬಿಸುಟುವ ತವಕದಲಿ ಈ
ಮನ ಓಡುತಿಹುದೇ ವಿನಃ ಸಿರ ಕರಗಳಲ್ಲ

ಹಳೆಯ ಬರೆಯ ಮರೆಯಲು ಬರೆಯಲೇ
ಮರೆತ ಬೆರೆತಗಳೊಂದಿಗೆ ಮತ್ತೆ ಬೆರೆಯಲು ಬರೆಯಲೇ

ಅರಿವಿನಲಿ ಬರೆಯಲೇ ಇಲ್ಲಾ
ಅರಿವಳಿಕೆಯಲಿ ಬರೆಯಲೇ

ಬರೆಯ ಬಯಸಿದೆ ಮನವು ಏನೆಲ್ಲಾ ಭಾವಗಳ
ತಳೆಯದಾಗಿವೆಯಲ್ಲ ಅಕ್ಕರದ ರೂಪಗಳ

ಏನ ಬರೆದೇನು ನಾನು ಬಾಲ್ಯ-ಮಳೆ-ಸೈಹಾದ್ರಿ
ಎಲ್ಲ ಬರೆದರು ಅದರ ನಾನೇಕೆ ಬರೆಯಲಿ

ಬರಹವೆಂಬುವರೆ ಅದನು ಬೇಕೆಂದೇ ಬರೆದುದನು
ಬಂದಾಗ ಬರೆದರೇ ತಿಳಿಸೇನು ತಿಳಿಸುವದನು

ಕಾಯುವೆನು ಕಾದೇನು ಆ ಸಮಯಕ್ಕಾಗಿ
ಮನದೋಟ ಮೈತಳೆದು ಅಕ್ಕರಗಳಾಗಿ

ಅಕ್ಕರದ ಅಕ್ಕರಗಳ್ ಮೂಡ್ಯಾವು ಒಂದು ದಿನ
ಸಿರ ಕರಗಳ್ ಆಡ್ಯಾವು ಮನದ ಮಾತನ್ನ…

– ಕಿಟ್ಟು

5 Responses

  1. ಕವಿತೆ ಹುಟ್ಟುವ ರೀತಿಯ ಅನಾವರಣದ ಸೂಕ್ಮನೋಟ. ಚೆನ್ನಾಗಿ ದೆ ಸಾರ್.

  2. ನಯನ ಬಜಕೂಡ್ಲು says:

    ಚಂದದ ಕವನ. ಮನಸಿನ ಭಾವಗಳು ಪದಗಳಾಗಿ ಹೊರ ಹೊಮ್ಮಿದಾಗ ಮನಸು ನಿರಾಳ

  3. ಮನದಲ್ಲಿ ಥಕ ಥೈಎಂದು ಕುಣಿಯುವ ಹಾಡುವ ಭಾವನೆಗಳನ್ನು ಎಂತು ಬರೆಯಲು ಸಾಧ್ಯ
    ಚೆಂದದ ಕವಿತೆ

  4. ಶಂಕರಿ ಶರ್ಮ says:

    ಮನದ ಭಾವನೆಗಳನ್ನು ಅಕ್ಷರ ರೂಪದಲ್ಲಿ ಭಟ್ಟಿ ಇಳಿಸುವ ಕಾರ್ಯ ಅದೆಷ್ಟು ಕಠಿಣ!..ಕವನ ಸೊಗಸಾಗಿದೆ.

  5. Padma Anand says:

    ಕವಿತೆಯ ಉಗಮದ ತಾಕಲಾಟಗಳ ಸುಂದರ ಚಿತ್ರಣ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: