ಅರಿಶಿಣ ಶಾಸ್ತ್ರ

Share Button

ಅರಿಶಿಣ ಹತ್ತಿದೆ ಜವಾಬ್ದಾರಿಯೆಂಬ ಹಳದಿ ಅಂಟಿದೆ
ಕಾರ್ಯ ಕಟ್ಟಳೆಗಳೆಂದು ಹೊರಗೆ ಇರುತ್ತಿದ್ದ ಬಾಲಕಿಯಿಂದು ಹೊಸಲು ದಾಟಲು ಹಿಂಜರಿಯುತಿದೆ

ಅಲೆಯುವ ಕಾಲುಗಳಿಗೆ ಓಡುವ ಮನಸ್ಸಿಗೆ ಇಂದು
ಹಿರಿಯರ ಒತ್ತಾಸೆ ಬಿಡದೆ ಕಟ್ಟಿ ಹಾಕಿದೆ
ಮೊದಲಿನ ತುಂಟತನ ಮಾಯವಾಗಿ ಪ್ರಬುದ್ಧತೆ ಮೊಗದಲಿ ಮನೆ ಮಾಡಿದೆ

ಪ್ರೀತಿಯೆಂಬ ಹರಿದ್ರಾ ಕೊಂಬು ತೇಯ್ದು ಮಮತೆಯೆಂಬ ಎಣ್ಣೆಯ ಬೆರಸಿ ಹಚ್ಚಿ
ಕಾಳಜಿಯೆಂಬ ಜೋಳದ‌ಕಾಳುಗಳ ಶಿರದ ಮೇಲೆ ಸುರಿದು

ಜೋಪಾನವೆಂಬ ಆರತಿಯೆತ್ತಿ ಕಣ್ಣಾಸರೆಯಾಗದಂತೆ ನೆಟಿಕೆ ತೆಗೆದಿದೆ

ಸಕಲವ ಗಮನಿಸುತಾ ಮಾತೃ ಹೃದಯ ಖುಷಿಯಿಂದ ತುಂಬಿದೆ
ಎಂದೂ ಭಾವುಕವಾಗದ ತಂದೆಯೆಂಬ ಗಟ್ಟಿ ಜೀವವಿಂದು
ಯಾರಿಗೂ ಕಾಣದಂತೆ ಇಳಿದ ಕಣ್ಣೀರ ಹನಿಗಳ ಒರೆಸಿದೆ

ಮತ್ತೊಂದು ಮನೆಯ ಬೆಳಗಲು ಹೃನ್ಮಂದಿರದ ದೀಪವಿಂದು ತೆರಳುತಿದೆ
ಖುಷಿಯ ಬಿತ್ತಿ ಖುಷಿಯ ಬೆಳೆ ತೆಗೆಯಲು ಸಜ್ಜಾಗುತ್ತಿದೆ

ಇನ್ನೊಂದು ಸುಖೀ ಕುಟುಂಬ ಕವಲೊಡೆಯುವ ಲಕ್ಷಣ ಕಾಣುತಿದೆ

– ಕೆ.ಎಂ ಶರಣಬಸವೇಶ

8 Responses

  1. ಚೆನ್ನಾದ ಕವಿತೆ..ಸಾರ್.

  2. ಶಂಕರಿ ಶರ್ಮ says:

    ಸುಖೀ ಕುಟುಂಬಕ್ಕೆ ಸಜ್ಜಾಗುತ್ತಿರುವ ಕನ್ಯೆಯ ಬಗೆಗಿನ ಸೊಗಸಾದ ಕವನ

  3. SHARANABASAVEHA K M says:

    ಧನ್ಯವಾದಗಳು ನಾಗರತ್ನ ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಗೆ

  4. ನಯನ ಬಜಕೂಡ್ಲು says:

    ಚೆನ್ನಾಗಿದೆ

  5. Anonymous says:

    ಚೆನ್ನಾಗಿದೆ

  6. ಖುಷಿಯ ಬಿತ್ತಿ ಖುಷಿಯ ಬೆಳೆ ತೆಗೆದ ಅರಿಶಿಣ ವನ್ನು ಇಂದು ಹೊಸದಾಗಿ ನೋಡುವಂತಾಯಿತು
    ವಂದನೆಗಳು ಶರಣ್ ಸರ್

  7. Padma Anand says:

    ಎಂದಿದ್ದರೂ ಹೆಣ್ಣುಮಕ್ಕಳ ವಿದಾಯ ಮನಸ್ಸನ್ನುಆರ್ದವಾಗಿಸುವ ಸಂಗತಿಯೇ ಹೌದು. ಚೆನ್ನಾಗಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: