Author: C N Bhagya Lakshmi
ಬಾಡಾದಿ ಕೇಶವನ ಭಕ್ತ ಕನಕ ದಾಸಪರಂಪರೆಯಲ್ಲಿ ಸೇರಿರುವುದೇ ಒಂದು ಅನುಪಮ. “ಕನಕದಾಸರ ಪಾದವನುಜ ಸ್ಮರಿಸುವ, ಮನುಜರೇ ಪರಮ ಧನ್ಯರು ” ದಾಸರ ಬಗೆಗಿನ ಒಂದೊಳ್ಳೆ ಉಕ್ತಿಯನ್ನು ಮತ್ತೊರ್ವ ದಾಸರಷ್ಟೇ ನೀಡಬಲ್ಲರು. ಇವರು ಹೇಳಿದಂತೆ ಕನಕದಾಸರನ್ನು ಅನವರತ ನೆನೆಯಲೇ ಬೇಕು. ಅಂದರೆ ವ್ಯಕ್ತಿಯೊಳಗಿನ ವ್ಯಕ್ತಿತ್ವವನ್ನು ಪ್ರೀತಿಸುವ ಮನ ನಮ್ಮದಾಗಬೇಕು....
ಕರುನಾಡ ತನುಮನದಲ್ಲಿ ಉದಿಸಿದ ಅಕ್ಕರೆಯ ಸವಿ ಸಕ್ಕರೆಯ ಮಂಡ್ಯ. ಅಚ್ಚ ಕನ್ನಡಿಗರಿಂದ ಆವೃತವಾದ ನನ್ನ ನೆಚ್ಚಿನ ಮಂಡ್ಯ , ಸುಂದರವಾದ ಹಳ್ಳಿಗಳಿಂದ ಕೂಡಿದ್ದು , ತನ್ನದೇ ಆದ ಭಾಷಾ ಸೊಗಡಿಗೂ ಹೆಸರುವಾಸಿಯಾಗಿದೆ. ನಿತ್ಯದ ಊಟವಾದ ಮುದ್ದೆ, ಬಸ್ಸಾರಂತೂ ನಾಡಿನಾಚೆಗೂ ಪ್ರಸಿದ್ಧಿ ಪಡೆದು, ಸಿನಿಮಾ ಕ್ಷೇತ್ರದ ಹಾಡಿನಲ್ಲಿಯೂ ಇಳಿದು ರಸದೌತಣ...
ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ಶಕ್ತಿ ನಮ್ಮ ಕನ್ನಡಕ್ಕಿದೆ ಅಲ್ವ…ಅದು ಕನ್ನಡದ ಶಕ್ತಿ. ಶತಶತಮಾನಗಳಿಂದ ಎಲ್ಲರೆದೆಯಲ್ಲಿ ಅಚ್ಚೊತ್ತಿದ ಒಂದು ನವನೀತ ಭಾವ ನಮ್ಮ ಕನ್ನಡ ಪರಂಪರೆಯದ್ದು. “ಆರಂಕುಶವಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಮಂ..” ಎನ್ನುವ ಸಾಲುಗಳು ನಮ್ಮ ಪಂಪನದ್ದು. ಅಲ್ಲದೇ ..”ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇನಾಗಿಯು ಮೇನೋ ತೀರ್ದಪುದೇ...
ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು ಸದ್ದು ಮಾಡುವ ವಾಹನಗಳು ಇಲ್ಲದ ರಸ್ತೆಯ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಆ ಜಗತ್ತಿಗೆ ಲಗ್ಗೆಯಿಟ್ಟ ಪೆಟ್ರೋಲ್,ಡೀಸಲ್ ಇಲ್ಲದ ಜಗತ್ತನ್ನೂ ಊಹಿಸಲೂ ಸಾಧ್ಯವಿಲ್ಲ ಅಲ್ಲವೇ… ಅದಕ್ಕೆ...
ಜಿಟಿಜಿಟಿ ಮಳೆಯು ಸುರಿದು ಕೆಲವು ಕಡೆ ಅವನಿ, ಕೆರೆಕಟ್ಟೆ, ನದಿಗಳೆಲ್ಲಾ ಸಂಭ್ರಮದಿ ಕೂಡಿದೆ. ಮತ್ತೆ ಕೆಲವು ಕಡೆ ಈಗ ಮಳೆ ಶುರುವಾಗಿದೆ. ಇನ್ನೂ ಕೆಲವು ಕಡೆ ಮಳೆ ಹೆಚ್ಚಾಗಿ ಅವಘಡ ಸಂಭವಿಸಿದೆ. ಇನ್ನೂ ಕೆಲವು ಕಡೆ ಮಳೆಯ ಸುಳಿವಿಲ್ಲ. ಇದು ಏನೇ ಇದ್ದರೂ ಹಬ್ಬಗಳು, ಪೂಜಾ ವ್ರತಗಳು...
ಅದೊಂದು ಪವಿತ್ರವಾದ , ಆಕರ್ಷಣೀಯವಾದ ಸ್ಥಳ. ವಿಶಾಲವಾದ ದ್ವಾರ. ದ್ವಾರದಲ್ಲಿ ಶಿಸ್ತು ಪಾಲಿಸಲು ವಿವರಿಸುವ ಸೆಕ್ಯೂರಿಟಿಗಳು ಪ್ರೀತಿಯಿಂದ ಗೈಡ್ ಮಾಡುವರು. ಹೊರಗಿನಿಂದ ನೋಡಲು ದೇಗುಲದ ಛಾಯೆಹೊಂದಿರುವ ಈ ವನದಲ್ಲಿ ಒಳಹೊಕ್ಕರೆ ಎಡಕ್ಕೆ ತಿರುಗಿದರೆ ಶ್ರೀ ಅವಧೂತ ದತ್ತಪೀಠ, ಧ್ಯಾನಮಂದಿರ,ಯೋಗಮಂದಿರ, ಕಛೇರಿ ಹೀಗೆ ಸಿಮೆಂಟ್ ಕಟ್ಟಡಗಳು ಆಕರ್ಷಿಸುತ್ತವೆ. ಬಲಕ್ಕೆ...
ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ, ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ ಮೆಚ್ಚಲೇಬೇಕು….. ಗೃಹದೊಳಗೆಲ್ಲಾ ನಿನ್ನದೇಕಾರಾಬಾರುದವಾಖಾನೆಯೊಳಗೂನಿಲ್ಲದ ದರ್ಬಾರುನಗರೀಕರಣದಲೂಪಾತ್ರದಳಗಿನ ಪ್ರಮುಖಬೇಡೆಂದರೂ ನುಗ್ಗುವನಿನ್ನ ಅವತಾರ ಮೆಚ್ಚಲೇಬೇಕು…. ಹೋರಾಟ ನಿನ್ನ ತಡೆಗಾಗಿಅಲ್ಲೂ ಬಿಂಬಿಸುವೆನೀರ ಹಿಡಿಕೆಯಾಗಿಜೀವ ಗುಟುಕಿನ ಕುರುಹಾಗಿಸುಟ್ಟರೂ ಬೂದಿಯಾಗದೆಮರುಬಳಕೆಯಾಗುವನಿನ್ನ ಅವತಾರ ಮೆಚ್ಚಲೇಬೇಕು…. ಆಧುನೀಕರಣದ...
ಈ ಬಾರಿ ಅಧಿಕಮಾಸ ಇರುವುದರಿಂದ ನಿಜಶ್ರಾವಣದಲ್ಲೇ ನಾವು ಈ ದೇವಿಯ ವ್ರತವನ್ನು ಆಚರಿಸುತ್ತೇವೆ. ವಿಷ್ಣು ಪತ್ನಿಯನ್ನು ಆರಾಧಿಸುವ ಇಂದಿನ ದಿನವನ್ನು “ವರಮಹಾಲಕ್ಷ್ಮಿ ವ್ರತ” ಎಂದು ಕರೆಯಲಾಗುತ್ತದೆ. “ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪ್ತಾನ್ತ್ಯಭಾರ್ಗವೇವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ”” ನಭೋ ಮಾಸೇ ಪೂರ್ಣಿಮಾಯಾಂ ಅಂತಿಕಸ್ಥೇ ಭೃಗೋರ್ದಿನೇಮತ್ಪೂಜಾ ತತ್ರ ಕರ್ತವ್ಯಾ...
ನಮ್ಮ ಪರಿಸರದಲ್ಲಿ ಮಾನವನ ಹೊರತಾಗಿ ಒಂದಿಲ್ಲೊಂದು ಜೀವಿಗಳು ಮೂಢನಂಬಿಕೆಗೆ ಸಿಕ್ಕಿ ಬಲಿಯಾಗುವುದನ್ನು ನೋಡುತ್ತಾ ಬಂದಿದ್ದೇವೆ. ಮಾನವರೂ ಕೂಡಾ ಕೆಲವು ವಿಷಯಗಳಿಗೆ ಸಿಲುಕುವುದುಂಟು. ಆದರೆ ಮಾರಣ ಹೋಮ ಅಂತ ನಡೆದಿಲ್ಲ. ಮಾನವನ ಹೊರತಾಗಿ ಪರಿಸರದ ಸಂಘರ್ಷಣೆಯಲ್ಲಿ ಸಿಲುಕಿದ ಕೆಲವು ಜೀವಿಗಳು ಮೂಢನಂಬಿಕೆಗೆ ಬಲಿಯಾಗಿವೆ.ಒಂದಷ್ಟು ಜನ ಇಂತಹ ಮೂಢನಂಬಿಕೆಗೆಗಳ ವಿರುದ್ಧ...
ಎಲ್ಲೋ ಒಂದು ಕಡೆಗಟ್ಟಿಯಾಗಿ ನೆಲೆಯೂರಿದ್ದೆಸಿಡಿಮದ್ದುಗಳ ಸಿಡಿಸಿತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕುಸಮತಟ್ಟಾದೆನಾಜೂಕುತನದಿ ಮನೆ,ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳುಉಳಿಯ ಅಳತೆಯೊಳಗೆಊಳಿಗಕೆ ಬಿದ್ದುಕಲಾಕೃತಿಗಳಾದವು ಕಪ್ಪು,ಬಿಳಿ,ಕಂದು ಬಣ್ಣಗಳಜಾಡಿನಲಿ ಶಿಲೆಯಾಗಿಮೂರ್ತಿಯಾಗಿಗುಡಿಗಳಲಿ ರಾರಾಜಿಸಿದೆ ಜಾತಿ, ಧರ್ಮ,ಮತವೆಂದುಹಿಂದೆ ಸರಿಯದೆಸದ್ದಿಲ್ಲದೆ ಸರ್ವಧರ್ಮಕೂಸಲ್ಲಿದೆ ಲಿಂಗಭೇದ ಎನಗಿತ್ತೇ…?ಧರ್ಮದ ಆಸರೆ ಎನಗಿತ್ತೇ…?ಗುಡಿಸೇರಿ ಮಡಿಯಾದೆಮಂಟಪಕೆ ಆಸರೆಯಾದೆ ನಿರ್ಜೀವದ ಪದರಕೆಪೂಜೆ,ಗೌರವ ಪಡೆದೆಲಿಂಗ, ವರ್ಣಗಳಲ್ಲಿ ಬೆರೆತುಸೆರೆಯಾದೆ ಧರೆಯ...
ನಿಮ್ಮ ಅನಿಸಿಕೆಗಳು…