ಮಾತು ಮನವ ಅರಳಿಸಬೇಕು

Share Button


ಮಾತು ಮತ್ತು ಮೌನ
ಮಾತು ಮನವ ಅರಳಿಸಬೇಕು
ಮೌನ ನಲಿವ ಉಳಿಸಬೇಕು
ಮಾತು ಒಲವಾಗಲಿ
ಎಲ್ಲರಿಗೂ ಒಳಿತಾಗಲಿ

ಮಾತು ಮೌನಗಳೆರಡು ಸೇರಿ
ಬದುಕನ್ನು ಸುಂದರಗೊಳಿಸಬೇಕು
ಹೊಸ ಬೆಳಕ ಚೆಲ್ಲಿ ಮನದ
ಕತ್ತಲೆಯ ಕಳೆಯಬೇಕು
ಬದುಕಿನ ಚೆಲುವ ಹೆಚ್ಚಿಸಬೇಕು
ಸುರಿವ ಕಣ್ಣೀರ ಸರಿಸಿ
ಪನ್ನೀರ ಹರಿಸಬೇಕು
ಚಿಂತೆಗಳ ಕಾರ್ಮೋಡ ಕರಗಿಸಿ
ನೆಮ್ಮದಿಯ ಚಿಲುಮೆಯ ಚಿಮ್ಮಿಸಬೇಕು

ಸಮುದ್ರದ ಅಲೆಗೂ ಜಗ್ಗದಂತ
ಉನ್ನತಿಯ ಸಾಧಿಸಬೇಕು
ಮಾತು ಮೌನದೊಳು ಬೆರೆತು
ಮೌನ ಒಲವ ಮಾತಾಗಬೇಕು
ಬದುಕಿನ ಪಥವ ಬದಲಿಸುವ
ಹೆಗ್ಗುರುತಿನ ಧ್ವನಿ ಯಾಗಬೇಕು

ಮಾತು ಮಾತಲ್ಲಿ ಜೀವ ಅರಳಲಿ
ದ್ವೇಷ ಅಸೂಯೆಗಳು ಅಳಿಯಲಿ
ಭವದೊಳಗಿನ ಬಾಂಧವ್ಯ ತೆರೆದುಕೊಳ್ಳಲಿ
ಮಾತು ಮೌನದ ಬೆಸುಗೆ ಹೊಸ ಉಸಿರಾಗಲಿ
ಜೀವ ತಂತಿಯ ಮೀಟುವ ಹಾಡಾಗಲಿ

ನಾಗರಾಜ ಜಿ. ಎನ್. ಬಾಡ ಕುಮಟ 

10 Responses

  1. Vidya Parvathi says:

    ಸೊಗಸಾಗಿದೆ

  2. MANJURAJ says:

    ಜೀವಂತಿಯ ಮೀಟುವಂತಿದೆ !

    ಅಭಿನಂದನೆ

  3. ಚಂದದ ಕವನ ಸಾರ್..

  4. ನಯನ ಬಜಕೂಡ್ಲು says:

    Nice

  5. ಪದ್ಮಾ ಆನಂದ್ says:

    ಸದಾಶಯ ಹೊಂದಿದ ಮಾತು ಹೇಗಿರಬೇಕು ಮತ್ತು ಅದರ ಮಹತ್ವವನ್ನು ತೊಳಿಸುವ ಸುಂದರ ಕವನ.

  6. Anonymous says:

    ಧನ್ಯವಾದಗಳು

  7. Nagaraj says:

    ಎಲ್ಲರಿಗೂ ಧನ್ಯವಾದಗಳು

  8. ಶಂಕರಿ ಶರ್ಮ says:

    ಸದಾಶಯವನ್ನು ಹೊಂದಿದ ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: