ಅಂಕದ ಪರದೆ

ನೊಂದು ,
ಕಡುನೊಂದ
ಪಾಂಡವರ
ನಿಟ್ಟುಸಿರು
ತಟ್ಟುತ್ತಿದೆ,
ಭೀಕರ
ಶಾಪವಾಗಿ….
ಅಪ್ರತಿಮ
ಪತಿವ್ರತೆ
ಪಾಂಚಾಲಿಯ
ಮುಡಿ ಜ್ವಾಲೆ
ಚಾಚಿದೆ
ಬೆಂಕಿಯ,
ಕೆನ್ನಾಲಗೆಯಾಗಿ….
ಮಾಡಿದ
ಕರ್ಮಗಳು
ತೊಡೆ ತಟ್ಟಿದ
ದುರ್ಯೋಧನನ
ಕಾಡುತ್ತಿವೆ
ಬೆಂಬಿಡದ
ಭೂತವಾಗಿ….
ಕ್ಷಮಿಸಿದ್ದಾನೆ
ನೂರು ಬಾರಿ
ಶಿಶುಪಾಲನಂತೆ
ಮಾನವೀಯತೆ ಮರೆತ
ಈತನನು
ಆ ದೇವ ,
ಕರುಣಾಮಯಾಗಿ….
ಕೊನೆಗೂ
ಧಾರ್ತರಾಷ್ಟ್ರ
ಧರಾಶಾಹಿಯಾದಾಗ
ಬೀಳಲೇಬೇಕಲ್ಲ
ಅಂಕದ ಪರದೆ …
ಏಳುವುದೆಂತು ?
ಬಲ್ಲವರಾರು !
ಚೆಲುವೆ ಚೆನ್ನ.
–ವೆಂಕಟಾಚಲ ಜಿ
ಚೆನ್ನಾಗಿದೆ
ಪಾಪದ ಕೊಡ ತುಂಬಿದ ಮೇಲೆ ಮುಳುಗಲೇಬೇಕಲ್ಲಾ.. ಬಹಳ ಅರ್ಥ ಪೂರ್ಣ ವಾದ ಸನ್ನಿವೇಶ ದ ಅನಾವರಣ ..ಆಧುನಿಕ ವಚನದಲ್ಲಿ ಅಥವಾ ಮುಕ್ತಕದಲ್ಲಿ ..ಹೊರಹೊಮ್ಮಿಸಿದ ರೀತಿ ಮನಕ್ಕೆ ಮುದತಂದಿತು ಸರ್.
ಧನ್ಯವಾದಗಳು ಮೇಡಮ್…ಪ್ರೋತ್ಸಾಹದಾಯಕ ನುಡಿಗಳಿಗೆ…
ಕವನ ಚೆನ್ನಾಗಿದೆ
ಧನ್ಯವಾದಗಳು ,
ಸಣ್ಣದಾದರೂ, ಅರ್ಥಗರ್ಭಿತ ಸಾಲುಗಳಲ್ಲಿ ಅಡಗಿದ ಸಂದೇಶ ಅದ್ಭುತ!
ಧನ್ಯವಾದಗಳು ಮೇಡಮ್
ಅರ್ಥಪೂರ್ಣವಾದ ಮನಮುಟ್ಟುವ ಸುಂದರ ಕವನ.