ಚಿಂತನೆ

ಬದುಕಿನಲ್ಲಿರಬೇಕು ಧ್ಯೇಯ
ಹಂಚಿ ತಿನ್ನುವುದು ನ್ಯಾಯ
ಮಾಡಬಾರದು ನಾವು
ಯಾರಿಗೂ ಅನ್ಯಾಯ
ಬದುಕು ಆಗಲಿ
ಸುಂದರ ಅಧ್ಯಾಯ
ಹೇಳಿಬಿಡಿ ಕಾಡುವ
ಚಿಂತೆಗಳಿಗೆ ವಿದಾಯ
ನಮ್ಮ ಕಾಯಕವ
ನಿಷ್ಟೆಯಿಂದ ಮಾಡಬೇಕು
ಬೇರೆಯವರ ಬಗ್ಗೆ
ಮಾತಾಡುವುದ ಬಿಡಬೇಕು
ನಮ್ಮ ಬದುಕನ್ನು ನಾವು
ಚೆನ್ನಾಗಿ ರೂಪಿಸಿಕೊಳ್ಳಬೇಕು
ಸತ್ ಚಿಂತನೆಗಳನ್ನು ಮಾಡುತ್ತ
ಸದ್ಗತಿಯನ್ನು ಪಡೆಯಬೇಕು
ಪ್ರಾರ್ಥನೆ ಧ್ಯಾನದಿಂದ
ನಮ್ಮ ಮನವು ಅರಳಲಿ
ನಮ್ಮೊಳಗಿನ ನಕರಾತ್ಮಕ
ದುಷ್ಟ ಶಕ್ತಿಗಳು ಅಳಿಯಲಿ
ಶಾಂತಿ ನೆಮ್ಮದಿಯು ಉಳಿಯಲಿ
ಉತ್ತಮ ಚಿಂತನೆ ನಮ್ಮದಾಗಲಿ
ಬಾಳ ದಾರಿಯು ಬೆಳಗಲಿ
ಸದ್ಗತಿಯು ನಮಗೆ ದೊರೆಯಲಿ
–ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
ಪ್ರಾಸಬದ್ಧವಾದ ಸುಂದರ ಕವಿತೆ ಚಂದರ ಬದುಕಿಗೆ ದಾರಿದೀಪದಂತಿದೆ
ಸುಂದರ ಕವಿತೆ ಸಾರ್
ಚೆನ್ನಾಗಿದೆ
ಸಕಾರಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುವ ಕವಿತೆ ಸರ್..ಚೆನ್ನಾಗಿದೆ..
ಸಕಾರಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುವ ಕವಿತೆ.. ಚೆನ್ನಾಗಿದೆ ಸರ್..
ಒಳ್ಳೆಯ ಆಶಯವನ್ನು, ಉತ್ತಮ ಸಂದೇಶವನ್ನು ಒಳಗೊಂಡ ಸುಂದರ ಕವನ.
ಸಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕುವ ಕವಿತೆ ಚೆನ್ನಾಗಿದೆ..
ತಮ್ಮೆಲ್ಲರ ಪ್ರೋತ್ಸಾದಾಯಕ ನುಡಿಗಳಿಗೆ ವಂದನೆಗಳು