ಚಿಂತನೆ

Share Button

ಬದುಕಿನಲ್ಲಿರಬೇಕು ಧ್ಯೇಯ
ಹಂಚಿ ತಿನ್ನುವುದು ನ್ಯಾಯ
ಮಾಡಬಾರದು ನಾವು
ಯಾರಿಗೂ ಅನ್ಯಾಯ

ಬದುಕು ಆಗಲಿ
ಸುಂದರ ಅಧ್ಯಾಯ
ಹೇಳಿಬಿಡಿ ಕಾಡುವ
ಚಿಂತೆಗಳಿಗೆ ವಿದಾಯ

ನಮ್ಮ ಕಾಯಕವ
ನಿಷ್ಟೆಯಿಂದ ಮಾಡಬೇಕು
ಬೇರೆಯವರ ಬಗ್ಗೆ
ಮಾತಾಡುವುದ ಬಿಡಬೇಕು

ನಮ್ಮ ಬದುಕನ್ನು ನಾವು
ಚೆನ್ನಾಗಿ ರೂಪಿಸಿಕೊಳ್ಳಬೇಕು
ಸತ್ ಚಿಂತನೆಗಳನ್ನು ಮಾಡುತ್ತ
ಸದ್ಗತಿಯನ್ನು ಪಡೆಯಬೇಕು

ಪ್ರಾರ್ಥನೆ ಧ್ಯಾನದಿಂದ
ನಮ್ಮ ಮನವು ಅರಳಲಿ
ನಮ್ಮೊಳಗಿನ ನಕರಾತ್ಮಕ
ದುಷ್ಟ ಶಕ್ತಿಗಳು ಅಳಿಯಲಿ

ಶಾಂತಿ ನೆಮ್ಮದಿಯು ಉಳಿಯಲಿ
ಉತ್ತಮ ಚಿಂತನೆ ನಮ್ಮದಾಗಲಿ
ಬಾಳ ದಾರಿಯು ಬೆಳಗಲಿ
ಸದ್ಗತಿಯು ನಮಗೆ ದೊರೆಯಲಿ

ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.

8 Responses

  1. ಪದ್ಮಾ ಆನಂದ್ says:

    ಪ್ರಾಸಬದ್ಧವಾದ ಸುಂದರ ಕವಿತೆ ಚಂದರ ಬದುಕಿಗೆ ದಾರಿದೀಪದಂತಿದೆ

  2. ಸುಂದರ ಕವಿತೆ ಸಾರ್

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ನವ್ಯಾ says:

    ಸಕಾರಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುವ ಕವಿತೆ ಸರ್..ಚೆನ್ನಾಗಿದೆ..

  5. ನವ್ಯಾ says:

    ಸಕಾರಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುವ ಕವಿತೆ.. ಚೆನ್ನಾಗಿದೆ ಸರ್..

  6. ಶಂಕರಿ ಶರ್ಮ says:

    ಒಳ್ಳೆಯ ಆಶಯವನ್ನು, ಉತ್ತಮ ಸಂದೇಶವನ್ನು ಒಳಗೊಂಡ ಸುಂದರ ಕವನ.

  7. ವಿನಯಾ ಎನ್. says:

    ಸಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕುವ ಕವಿತೆ ಚೆನ್ನಾಗಿದೆ..

  8. ನಾಗರಾಜ್ ಜಿ. ಎನ್. ಬಾಡ says:

    ತಮ್ಮೆಲ್ಲರ ಪ್ರೋತ್ಸಾದಾಯಕ ನುಡಿಗಳಿಗೆ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: