ಬಲವಿದೆ ಎಂದು……

Share Button

ಬಲವಿದೆ ಇಂದು ಹಾರಾಟ ಮಾಡುವೆ
ನಾಳೆಗೆ ಏನು ಗೊತ್ತಿಲ್ಲ
ನನ್ನ ಅಸ್ತಿತ್ವವನೆ ಅಳಿಸಿ ಹಾಕುವೆ
ಮುಂದಿನ ಸತ್ಯವ ಅರಿತಿಲ್ಲ//೧//

ದರ್ಪವು ಇಹುದು ಹಣಬಲ ಇಹುದು
ನಿನಗೇ ಗೆಲುವು ಎನ್ನುವೆ ನೀ
ಕಾಲನ ಸೆಳೆತಕೆ ಸಿಕ್ಕಿದ ಮೇಲೆ
ಬದುಕಿನ ಸತ್ಯವ ತಿಳಿಯುವೆ ನೀ//೨//

ಎಲ್ಲರು ನಾವು ಜಗದಲಿ ಎಂದೂ
ಕಾಲನು ಕುಣಿಸುವ ಗೊಂಬೆಗಳು
ಆತನು ಬೀಸುವ ಗಾಳಿಗೆ ತೂರುವ
ಒಣಗಿ ಹಾರುವ ಜಳ್ಳುಗಳು//೩//

ದೇಹದಿ ನೆತ್ತರು ಚಿಮ್ಮುತಲಿರಲು
ಅರ್ಥವೆ ಆಗದು ಗೋಳು
ರಕ್ತದ ಹರಿವು ಕುಗ್ಗುತ ಸಾಗಲು
ತಿಳಿಯುವೆ ನಶ್ವರ ಬಾಳು//೪//

ಇಂದಿನ ಶಕ್ತಿ ನಾಳೆಗೆ ನಶಿಸಲು
ಕಲಿಯುವೆ ಜೀವನ ಸತ್ಯ
ಬಾಗಿದ ಬಾಳೆಯ ಗೊನೆಯೊಲು ನಾವು
ಬದುಕಲು ಬೇಕಿದೆ ನಿತ್ಯ//೫//

ಹರೆಯವು  ಹುರುಪು ಎಲ್ಲವು ಇದ್ದರೂ
ಗೋಡೆಗೆ ತಲೆಯ ಜಜ್ಜದಿರು
ಕಾಲನ ಕುಣಿಕೆಯು ಕೋಳವ ಹಾಕಲು
ದೇಹವ ತ್ಯಜಿಸಲು ಮರುಗದಿರು//೬//

ಶುಭಲಕ್ಷ್ಮಿ ಆರ್ ನಾಯಕ

6 Responses

  1. ಎಚ್ಚರಿಕೆ ಯ ಗಂಟೆಯ ಕವನ ಚೆನ್ನಾಗಿ ದೆ..ಚಿಂತನೆ ಹಚ್ಚುವಂತೆ ಮಾಡಿದೆ..

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಕವನ

  3. ಶಂಕರಿ ಶರ್ಮ says:

    ಬಾಳಿನ ನಶ್ವರತೆಯ ಬಗ್ಗೆ ಎಚ್ಚರಿಕೆ ನೀಡುವ ಚಿಂತನಯೋಗ್ಯ ಕವನ.

  4. MANJURAJ H N says:

    ಸಕಾಲಿಕ ಎಚ್ಚರ! ಲಯಬದ್ಧ, ಛಂದೋಗುಣದ ಅರ್ಥ ಹೂರಣ!!
    ಸೊಗಸಾಗಿದೆ ಮೇಡಂ,

    ದಿನಕರ ದೇಸಾಯಿ ನೆನಪಾದರು. ಅವರದು ಸ್ವತಂತ್ರ ಚೌಪದಿ; ನಿಮ್ಮದು ಕವಿತೆಯಲೇ ಚೌಪದಿ.
    ಮುಂದುವರಿಸಿ, ನಿಮಗೆ ಈ ಹದ ಕೈಗೂಡಿದೆ; ನಮಗದು ಹೃದ್ಗತವಾಗಲಿ. ಶುಭಾಶಯ.

  5. ಚಂದದ ಕವನ

  6. ಪದ್ಮಾ ಆನಂದ್ says:

    ಕವಿತೆ ಜೀವನದ ಸೂಕ್ಷ್ಮತೆಯನ್ನು ಕಾವ್ಯಮಯವಾಗಿ ಹಿಡಿದಿಟ್ಟಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: